More

    ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮಧುಮಗನ ಮೆರವಣಿಗೆ ಮಾಡಿದ್ದು ಹೀಗೆ… ವಿಡಿಯೋ ವೈರಲ್​!

    ನವದೆಹಲಿ: ಬೇಸಿಗೆ ಬಿರುಬಿಸಿಲು ಪ್ರಾರಂಭವಾಗಿದ್ದು, ದೇಶದ ಹಲವೆಡೆ ಈ ಬಾರಿ ಹಿಂದೆಂದಿಗಿಂತಲೂ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಈ ಬಗ್ಗೆ ಹವಾಮಾನ ಇಲಾಖೆ ಕೂಡ ಎಚ್ಚರಿಕೆ ನೀಡಿದೆ.

    ಇನ್ನು ಮದುವೆ ಇನ್ನಿತರೆ ಸಮಾರಂಭಗಳಿಗೂ ಬಿಸಿಲು ಅಡ್ಡಿಪಡಿಸುತ್ತಿದೆ. ಬಿರುಬಿಸಿಲಿನಿಂದ ತಪ್ಪಿಸಿಕೊಳ್ಳಲು ಮದುವೆ ಮೆರವಣಿಗೆಯಲ್ಲಿ ಪೆಂಡಾಲ್​​​ ಬಳಸಿರುವ ವಿಡಿಯೋ ಇದೀಗ ಭಾರೀ ವೈರಲ್​ ಆಗುತ್ತಿದೆ.

    ಉತ್ತರ ಭಾರತದ ಮದುವೆ ಕಾರ್ಯಕ್ರಮದಲ್ಲಿ ಕುದುರೆ ಮೇಲೆ ಮಧುಮಗನನ್ನು ಮೆರವಣಿಗೆ ಮಾಡುವುದು ಸಂಪ್ರದಾಯ. ಹೀಗೊಂದು ಮದುವೆ ಸಮಾರಂಭದಲ್ಲಿ ರಸ್ತೆ ಮೇಲೆ ಮಧುಮಗನನ್ನು ಕುದುರೆ ಮೇಲೆ ಮೆರವಣಿಗೆ ಮಾಡಲಾಗುತ್ತಿತ್ತು. ಇದಿಷ್ಟೇ ಆಗಿದ್ದರೆ ಸಾಮಾನ್ಯ ಎನ್ನಬಹುದಿತ್ತು. ಆದರೆ ಇಲ್ಲಿ ಮಧುಮಗನನ್ನು ಬಿಸಿಲಿನಿಂದ ರಕ್ಷಿಸಲು ಪೆಂಡಾಲ್​​​ ಬಳಸಿ ಕರೆತರಲಾಗುತ್ತಿತ್ತು. ಇದನ್ನು ಗಮನಿಸಿದ ಟ್ವಿಟ್ಟಿಗರೊಬ್ಬರು ತಮ್ಮ ಟ್ವೀಟ್​ ನಲ್ಲಿ ಹಾಕಿದ ಈ ವಿಡಿಯೋ ಗೆ ಭಾರಿ ಪ್ರತಿಕ್ರಿಯೆ ಬರುತ್ತಿದೆ.

    ಇನ್ನು ಸುಡುಬಿಸಿಲಿಗೆ ಭಾರತೀಯರು ಪರಿಹಾರ ಕಂಡುಕೊಂಡಿದ್ದಾರೆ ಎಂಬ ಅಡಿಬರಹದಲ್ಲಿ ಪೋಸ್ಟ್​ ಮಾಡಿರುವ ಈ ವಿಡಿಯೋ ಭಾರೀ ಮೆಚ್ಚುಗೆ ಗಳಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts