ನವದೆಹಲಿ: ಬೇಸಿಗೆ ಬಿರುಬಿಸಿಲು ಪ್ರಾರಂಭವಾಗಿದ್ದು, ದೇಶದ ಹಲವೆಡೆ ಈ ಬಾರಿ ಹಿಂದೆಂದಿಗಿಂತಲೂ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಈ ಬಗ್ಗೆ ಹವಾಮಾನ ಇಲಾಖೆ ಕೂಡ ಎಚ್ಚರಿಕೆ ನೀಡಿದೆ.
ಇನ್ನು ಮದುವೆ ಇನ್ನಿತರೆ ಸಮಾರಂಭಗಳಿಗೂ ಬಿಸಿಲು ಅಡ್ಡಿಪಡಿಸುತ್ತಿದೆ. ಬಿರುಬಿಸಿಲಿನಿಂದ ತಪ್ಪಿಸಿಕೊಳ್ಳಲು ಮದುವೆ ಮೆರವಣಿಗೆಯಲ್ಲಿ ಪೆಂಡಾಲ್ ಬಳಸಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಉತ್ತರ ಭಾರತದ ಮದುವೆ ಕಾರ್ಯಕ್ರಮದಲ್ಲಿ ಕುದುರೆ ಮೇಲೆ ಮಧುಮಗನನ್ನು ಮೆರವಣಿಗೆ ಮಾಡುವುದು ಸಂಪ್ರದಾಯ. ಹೀಗೊಂದು ಮದುವೆ ಸಮಾರಂಭದಲ್ಲಿ ರಸ್ತೆ ಮೇಲೆ ಮಧುಮಗನನ್ನು ಕುದುರೆ ಮೇಲೆ ಮೆರವಣಿಗೆ ಮಾಡಲಾಗುತ್ತಿತ್ತು. ಇದಿಷ್ಟೇ ಆಗಿದ್ದರೆ ಸಾಮಾನ್ಯ ಎನ್ನಬಹುದಿತ್ತು. ಆದರೆ ಇಲ್ಲಿ ಮಧುಮಗನನ್ನು ಬಿಸಿಲಿನಿಂದ ರಕ್ಷಿಸಲು ಪೆಂಡಾಲ್ ಬಳಸಿ ಕರೆತರಲಾಗುತ್ತಿತ್ತು. ಇದನ್ನು ಗಮನಿಸಿದ ಟ್ವಿಟ್ಟಿಗರೊಬ್ಬರು ತಮ್ಮ ಟ್ವೀಟ್ ನಲ್ಲಿ ಹಾಕಿದ ಈ ವಿಡಿಯೋ ಗೆ ಭಾರಿ ಪ್ರತಿಕ್ರಿಯೆ ಬರುತ್ತಿದೆ.
ಇನ್ನು ಸುಡುಬಿಸಿಲಿಗೆ ಭಾರತೀಯರು ಪರಿಹಾರ ಕಂಡುಕೊಂಡಿದ್ದಾರೆ ಎಂಬ ಅಡಿಬರಹದಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ ಭಾರೀ ಮೆಚ್ಚುಗೆ ಗಳಿಸುತ್ತಿದೆ.