ಮುಂಬೈ: “ನಮ್ಮ ಯುವ ವಿಕೆಟ್ ಕೀಪರ್ (ನಗುತ್ತ) ಕೊನೆಯಲ್ಲಿ 3 ಸಿಕ್ಸರ್ ಸಿಡಿಸಿದ್ದು ನೆರವಾಯಿತು. ಅದೇ ಉಭಯ ತಂಡಗಳ ನಡುವೆ ವ್ಯತ್ಯಾಸ ತಂದಿತು. ನಮಗೆ 10-15 ಹೆಚ್ಚುವರಿ ರನ್ ಅಗತ್ಯವಿತ್ತು’ ಎಂದು ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಮುಂಬೈ ಇಂಡಿಯನ್ಸ್ ವಿರುದ್ಧದ 20 ರನ್ ಗೆಲುವಿನ ಬಳಿಕ ಮಾಜಿ ನಾಯಕ ಎಂಎಸ್ ಧೋನಿ ಬಗ್ಗೆ ವಿಶೇಷ ಮೆಚ್ಚುಗೆ ಸೂಚಿಸಿದರು.
ಹಾರ್ದಿಕ್ ಪಾಂಡ್ಯ ಎಸೆದ ಸಿಎಸ್ಕೆ ಇನಿಂಗ್ಸ್ನ ಕೊನೇ ಓವರ್ನಲ್ಲಿ 42 ವರ್ಷದ ಧೋನಿ 3 ಸಿಕ್ಸರ್ ಸಹಿತ 20 ರನ್ ಗಳಿಸಿದರು ಮತ್ತು ಕೊನೆಗೆ ಸಿಎಸ್ಕೆ ಇಷ್ಟೇ ರನ್ ಅಂತರದಿಂದ ಜಯಿಸಿದ್ದು ವಿಶೇಷವೆನಿಸಿತು.
“ನಾವು 215-220 ರನ್ ನಿರೀೆಯಲ್ಲಿದ್ದೆವು. ಆದರೆ ಬುಮ್ರಾ ಅತ್ಯುತ್ತಮ ಬೌಲಿಂಗ್ ಮಾಡಿ ನಿಯಂತ್ರಣ ಹೇರಿದರು. ಬೌಲಿಂಗ್ನಲ್ಲಿ ನಮ್ಮ ಕಾರ್ಯತಂತ್ರವೂ ಲಿಸಿತು. ನಮ್ಮ ಮಾಲಿಂಗ (ಪಥಿರಣ) ಅತ್ಯುತ್ತಮ ಯಾರ್ಕರ್ ಎಸೆತಗಳನ್ನು ಎಸೆದರು’ ಎಂದು ಋತುರಾಜ್ ಹೇಳಿದರು.
ಸಿಎಸ್ಕೆ ತಂಡ 207 ರನ್ ಸವಾಲಿಗೆ ಪ್ರತಿಯಾಗಿ ರೋಹಿತ್ ಶರ್ಮ (105*) ಭರ್ಜರಿ ಶತಕ ಸಿಡಿಸಿದರೂ, ಮುಂಬೈಗೆ ಗೆಲುವು ತಂದುಕೊಡಲಾಗಲಿಲ್ಲ. ಇಶಾನ್ ಕಿಶನ್ (23) ಜತೆಗೂಡಿ ಮೊದಲ ವಿಕೆಟ್ಗೆ 70 ಮತ್ತು 3ನೇ ವಿಕೆಟ್ಗೆ ತಿಲಕ್ ವರ್ಮ (31) ಜತೆ 50 ರನ್ ಸೇರಿಸಿದ ರೋಹಿತ್ಗೆ ಇತರ ಬ್ಯಾಟರ್ಗಳಿಂದ ಸಮರ್ಥ ಬೆಂಬಲ ಸಿಗಲಿಲ್ಲ. ಹೀಗಾಗಿ ರೋಹಿತ್ ಗೆಲುವಿಲ್ಲದೆ, ಶತಕಕ್ಕೆ ತೃಪ್ತಿಪಟ್ಟರು. ಮಥೀಶ ಪಥಿರಣ (28ಕ್ಕೆ 4) ದಾಳಿಗೆ ನಲುಗಿದ ಮುಂಬೈ 6 ವಿಕೆಟ್ಗೆ 186 ರನ್ ಗಳಿಸಲಷ್ಟೇ ಶಕ್ತವಾಯಿತು.
*ಸಿಎಸ್ಕೆ ಯೋಜನೆ ಉತ್ತಮವಾಗಿತ್ತು ಮತ್ತು ಸಣ್ಣ ಬೌಂಡರಿ ಗೆರೆಯನ್ನು ಉತ್ತಮವಾಗಿ ಬಳಸಿಕೊಂಡಿತು. ವಿಕೆಟ್ ಹಿಂದೆ ನಿಂತು ಸಲಹೆ ನೀಡುವ ಧೋನಿ ಕೂಡ ಸಿಎಸ್ಕೆ ಯಶಸ್ಸಿಗೆ ನೆರವಾಗುತ್ತಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದರು.
*2: ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್ ಪರ 2 ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿದರು.
3: ರೋಹಿತ್ ಶರ್ಮ ಹಾಲಿ ಐಪಿಎಲ್ನ 3ನೇ ಶತಕವೀರ. ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್ ಮೊದಲಿಬ್ಬರು.
*5: ರೋಹಿತ್ ಶರ್ಮ ಟಿ20 ಕ್ರಿಕೆಟ್ನಲ್ಇ 500 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಮತ್ತು ವಿಶ್ವದ 5ನೇ ಬ್ಯಾಟರ್ ಎನಿಸಿದರು. ಕಾಲಿನ್ ಮುನ್ರೊ (548), ಆಂಡ್ರೆ ರಸೆಲ್ (648), ಕೈರಾನ್ ಪೊಲ್ಲಾರ್ಡ್ (860), ಕ್ರಿಸ್ ಗೇಲ್ (1056) ಮೊದಲ ನಾಲ್ವರು.
IPL 2024: ತವರಿನಲ್ಲೂ ಸೋಲಿನ ಸರಪಳಿ ಕಳಚದ ಆರ್ಸಿಬಿ; ರನ್ಮಳೆಯಲ್ಲಿ ಸನ್ರೈಸರ್ಸ್ ಎದುರು ವೀರೋಚಿತ ಸೋಲು