ಕೋಲ್ಕತ: ಪಶ್ಚಿಮ ಬಂಗಾಳ ಸಿಐಡಿ, ಹೆಮ್ತಾಬಾದ್ ಬಿಜೆಪಿ ಶಾಸಕ ದೇಬೇಂದ್ರನಾಥ್ ರಾಯ್ ಅವರ ಸಾವಿನ ಪ್ರಕರಣದ ಚಾರ್ಜ್ಶೀಟ್ ಅನ್ನು ಶನಿವಾರ ಸಲ್ಲಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಾರ್ಜ್ಶೀಟ್ನಲ್ಲಿ ಏನಿದೆ ಎಂಬುದು ಬಹಿರಂಗವಾಗಿಲ್ಲ. ಇದೇ ವೇಳೆ ರಾಯ್ ಕುಟುಂಬ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದೆ.
ಉತ್ತರ್ ದಿನ್ಜಾಪುರ ಜಿಲ್ಲೆಯ ಬಿಂದಾಲ್ ಗ್ರಾಮದ ಅಂಗಡಿಯ ಚಾವಡಿಯ ಸೀಲಿಂಗ್ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ರಾಯ್ ಅವರ ಮೃತದೇಹ ಜುಲೈ 13ರಂದು ಪತ್ತೆಯಾಗಿತ್ತು. ಈ ಅಂಗಡಿ ಅವರ ನಿವಾಸಕ್ಕೆ ಸಮೀಪವೇ ಇದೆ.
ಇದನ್ನೂ ಓದಿ: ಸಿರಗುಪ್ಪದಲ್ಲಿ ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮದ್ಯದಂಗಡಿ ಮಚ್ಚಿಸಿದ ಅಬಕಾರಿ ಇಲಾಖೆ
ಈ ಕೇಸ್ಗೆ ಸಂಬಂಧಿಸಿ ಇಂದು ನಾವು ಚಾರ್ಜ್ಶೀಟ್ ಸಲ್ಲಿಸಿದ್ದೇವೆ. ಇದನ್ನು ನಮ್ಮ ತನಿಖೆಯಲ್ಲಿ ಸಂಗ್ರಹಿಸಲಾಗಿರುವ ಮಾಹಿತಿ ಪ್ರಕಾರ ಸಿದ್ಧಪಡಿಸಿದ್ದೇವೆ ಎಂದು ಸಿಐಡಿ ಅಧಿಕಾರಿ ತಿಳಿಸಿದ್ದಾರೆ. ಇದೇ ವೇಳೆ, ರಾಯ್ ಪತ್ನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಿಐಡಿ ಸಲ್ಲಿಸಿರುವ ಚಾರ್ಚ್ಶೀಟ್ಗೂ ಪೊಲೀಸರ ಎಫ್ಐಆರ್ಗೂ ಏನೂ ವ್ಯತ್ಯಾಸ ಇರುವುದು ಸಾಧ್ಯವಿಲ್ಲ. ನಮಗೆ ಅದರಲ್ಲಿ ನಂಬಿಕೆ ಇಲ್ಲ. ಸಿಬಿಐ ತನಿಖೆ ನಡೆಯಬೇಕು ಎಂದು ಪಟ್ಟು ಹಿಡಿದು ಆಗ್ರಹಿಸಿದ್ದಾರೆ. (ಏಜೆನ್ಸೀಸ್)