ಬೆಂಗಳೂರು: ರಾಜಧಾನಿಯಲ್ಲಿ ಜಲಾಮ ಎದುರಾಗಿದ್ದು, ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಮಾರ್ಚ್ಗೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಲಕ್ಷಣಗಳು ಈಗಲೇ ಗೋಚರಿಸಿವೆ. ಟ್ಯಾಂಕರ್ ನೀರಿಗೆ ದುಪ್ಪಟ್ಟು ಹಣ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ.
ದಿನದಿಂದ ದಿನಕ್ಕೆ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಟ್ಯಾಂಕರ್ ಮಾಲೀಕರು ಮುಂದಾಗಿದ್ದಾರೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸಾಯೆಂಬಂತೆ ಕಳೆದ ತಿಂಗಳು 600&800 ರೂ. ಇದ್ದ ಟ್ಯಾಂಕರ್ ನೀರಿನ ದರ ಏಕಾಏಕಿ 2000 ರೂ. ದಾಟಿದೆ. ಬಹುತೇಕ ಕೊಳವೆ ಬಾವಿಗಳು ಬತ್ತಿರುವುದರಿಂದ ದೂರದ ಪ್ರದೇಶಗಳಿಗೆ ತೆರಳಿ ನೀರು ತರಬೇಕಿದೆ. ಖಾಸಗಿ ಕೊಳವೆ ಬಾವಿ ಮಾಲೀಕರು ನಮ್ಮಿಂದ ಹೆಚ್ಚಿನ ದುಡ್ಡು ಪಡೆದುಕೊಳ್ಳುತ್ತಿದ್ದಾರೆ.
ಕೆ.ಆರ್.ಪುರ, ರಾಜರಾಜೇಶ್ವರಿ ನಗರ, ಚನ್ನಸಂದ್ರ, ಬೊಮ್ಮನಹಳ್ಳಿ, ಕೆಂಗೇರಿ, ಪೀಣ್ಯ, ದಾಸರಹಳ್ಳಿ, ಕೆಂಚೇನಹಳ್ಳಿ, ಹೊಸಕೆರೆಹಳ್ಳಿ, ಕನಕಪುರ ರಸ್ತೆ, ವೈಟ್ಫೀಲ್ಡ್, ಹೊರಮಾವು, ಕೋರಮಂಗಲ, ಜಯನಗರ ಮುಂತಾದ ಕಡೆಗಳಲ್ಲಿ ನೀರಿನ ಸಮಸ್ಯೆ ತಲೆತೋರಿದ್ದು, ಟ್ಯಾಂಕರ್ ನೀರಿನ ಬೆಲೆಯೂ ಏರಿಕೆಯಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕವೂ ಸ್ಥಗಿತ:
ಬರಗಾಲದ ಬಿಸಿ ಶುದ್ಧ ಕುಡಿಯುವ ನೀರಿನ ಘಟಕಕ್ಕೂ ತಟ್ಟಿದೆ. ಕೊಳವೆ ಬಾವಿಗಳು ಬತ್ತಿರುವುದರಿಂದ ಕುಡಿಯುವ ನೀರಿನ ಟಕಗಳು ಒಂದೊಂದಾಗಿ ಸ್ಥಗಿತಗೊಳ್ಳುತ್ತಿವೆ. ಈ ಸಮಸ್ಯೆ ಯಶವಂತಪುರ ಭಾಗದಲ್ಲಿ ಹೆಚ್ಚಿದೆ. ಮಾರ್ಚ್ನಲ್ಲಿ ಸ್ಥಗಿತಗೊಳ್ಳುವ ಕುಡಿಯುವ ನೀರಿನ ಘಟಕಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.
ಕಳೆದ ಮೂರು ವರ್ಷದಿಂದ ಒಬ್ಬನೇ ವ್ಯಕ್ತಿಯ ಬಳಿಯಿಂದ ಟ್ಯಾಂಕರ್ ನೀರು ತರಿಸುತ್ತಿದ್ದೆ. ಪ್ರತಿ ಬಾರಿಯೂ ಹೇಳಿದ ಒಂದೆರಡು ಗಂಟೆಗಳಲ್ಲಿ ನೀರು ಸರಬರಾಜು ಮಾಡುತ್ತಿದ್ದ. ಸದ್ಯದ ಪರಿಸ್ಥಿತಿಯಲ್ಲಿ ಕರೆ ಮಾಡಿದರೆ, ಮೂರು ದಿನಗಳ ಬಳಿಕ ನೀರು ಟ್ಯಾಂಕರ್ ನೀರು ತಂದುಕೊಡುತ್ತಿದ್ದಾನೆ. ಪ್ರಶ್ನಿಸಿದರೆ ಕೊಳವೆ ಬಾವಿ ಬತ್ತಿವೆ. ನಮಗೂ ನೀರಿಲ್ಲ ಎಂದು ಉತ್ತರಿಸುತ್ತಾನೆ. ಬೆಲೆಯೂ ದುಪ್ಪಟ್ಟಾಗಿದೆ. ಮಾರ್ಚ್ನಿಂದ ನೀರಿನ ಸಮಸ್ಯೆ ಹೆಚ್ಚಲಿದೆ.
-ಚಂದ್ರಮೋಹನ್, ಬಸವನಗುಡಿ, ಬಾಡಿಗೆ ಮನೆ ಮಾಲೀಕ
ಕೈಕಟ್ಟಿ ಕುಳಿತ ಜನಪ್ರತಿನಿಧಿಗಳು!
ಕಳೆದ ವರ್ಷ ಚುನಾವಣಾ ಪ್ರಚಾರದಲ್ಲಿದ್ದ ರಾಜಕೀಯ ನಾಯಕರ ಮತದಾರರನ್ನು ಸೆಳಯಲು ಕೆಲ ಭಾಗಗಳಿಗೆ ಮುತುವರ್ಜಿ ವಹಿಸಿ ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಇವರ್ಯಾರೂ ನೀರಿನ ಸಮಸ್ಯೆ ಕೇಳಲು ತಯಾರಿಲ್ಲ. ಟ್ಯಾಂಕರ್ ಮಾಫಿಯಾದಿಂದ ಹೈರಾಣಾಗಿದ್ದೇವೆ. ಮದ್ಯಮ ವರ್ಗದ ಮಂದಿ ದುಡಿದ ಅರ್ಧದಷ್ಟು ದುಡ್ಡನ್ನು ಟ್ಯಾಂಕರ್ ನೀರಿಗಾಗಿ ವ್ಯಯಿಸಬೇಕಾಗಿದೆ. ಸಮಸ್ಯೆ ಬಗೆಯರಿಸಲು ಯಾವೊಬ್ಬ ನಾಯಕರೂ ಈವರೆಗೆ ಮುಂದಾಗಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.