ಹೈದರಾಬಾದ್: ಪ್ರಖ್ಯಾತ ಟಿವಿ ಧಾರಾವಾಹಿ ಮತ್ತು ಸಿನಿಮಾ ನಟಿ ಶ್ರಾವಣಿ ಕೊಂಡಪಲ್ಲಿ (26) ಆತ್ಮಹತ್ಯೆ ಪ್ರಕರಣ ಇದೀಗ ಹೊಸ ಆಯಾಮ ಪಡೆದುಕೊಂಡಿದ್ದು, ನಿರ್ಮಾಪಕರೊಟ್ಟಿಗೆ ಸಂಬಂಧ ಇತ್ತೆಂಬ ಹೊಸ ವಿಚಾರ ಹರಿದಾಡುತ್ತಿದೆ.
ಮೃತ ಶ್ರಾವಣಿ ಮತ್ತು ಸಿನಿಮಾ ನಿರ್ಮಾಪಕ ಅಶೋಕ್ ರೆಡ್ಡಿ ನಡುವೆ ನಡೆದಿದೆ ಎನ್ನಲಾದ ಫೋನ್ ಕಾಲ್ ಸಂಭಾಷಣೆಯ ಆಡಿಯೋ ಕ್ಲಿಪ್ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಆಡಿಯೋ ಕ್ಲಿಪ್ನಲ್ಲಿ ಶ್ರಾವಣಿ ಮತ್ತು ಅಶೋಕ್ ರೆಡ್ಡಿ ನಡುವಿನ ಸಂಬಂಧದ ಬಗ್ಗೆ ಉಲ್ಲೇಖವಾಗಿದೆ. ದೇವರಾಜ್ ನನಗೆ ಕಿರುಕುಳ ನೀಡುತ್ತಿದ್ದಾರೆ. ನಿನ್ನ ಬಣ್ಣ ಬಯಲು ಮಾಡುತ್ತೇನೆಂದು ಬೆದರಿಕೆ ಹಾಕುತ್ತಿದ್ದಾನೆ. ನಾವಿಬ್ಬರು ಒಟ್ಟಿಗೆ ಇರುವುದನ್ನು ಅವನು ನೋಡಿದ್ದಾನಂತೆ ಎಂದು ಶ್ರಾವಣಿ, ಅಶೋಕ್ ರೆಡ್ಡಿಗೆ ಹೇಳುತ್ತಿರುವುದು ಆಡಿಯೋದಲ್ಲಿ ಇದೆ.
ಇದನ್ನೂ ಓದಿ: ಕೇವಲ 58 ಮತದಾರರ ಕಷ್ಟಸುಖ ಅರಿಯಲು 24 ಕಿ.ಮೀ ನಡೆದ ಸಿಎಂ ಯಾರು ಗೊತ್ತಾ?
ಮಾನಸು ಮಮತಾ ಮತ್ತು ಮೌನರಾಗಂ ಸೇರಿದಂತೆ ವಿವಿಧ ಧಾರಾವಾಹಿಗಳಲ್ಲಿ ನಟಿಸಿರುವ ಶ್ರಾವಣಿ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್ನ ಎಸ್ಆರ್ ನಗರ ಠಾಣಾ ವ್ಯಾಪ್ತಿಯ ಮಧುರನಗರ ಏರಿಯಾದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಅವರ ಕುಟುಂಬ ಟಿಕ್ಟಾಕ್ನಲ್ಲಿ ಪರಿಚಯವಾಗಿ ದೇವರಾಜ್ ಎಂಬಾತ ನೀಡಿದ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಳೆಂದು ಆರೋಪಿಸಿದ್ದಾರೆ. ಇದೀಗ ಪೊಲೀಸರು ದೇವರಾಜ್ ಬೆನ್ನುಬಿದ್ದಿದ್ದಾರೆ.
ಇನ್ನು ಅಶೋಕ್ ರೆಡ್ಡಿ, ಕಾರ್ತಿಕೇಯ ನಟನೆಯ ಯಶಸ್ವಿ ಆರ್ಎಕ್ಸ್ 100 ಚಿತ್ರದ ನಿರ್ಮಾಪಕರು. (ಏಜೆನ್ಸೀಸ್)
ಆತ್ಮಹತ್ಯೆಗೆ ಶರಣಾದ ಪ್ರಖ್ಯಾತ ಕಿರುತೆರೆ ನಟಿ: ಬಯಲಾಯ್ತು ಟಿಕ್ಟಾಕ್ ಗೆಳೆಯನ ಕರಾಳ ಮುಖ?!