More

    ನಟಿ ಶ್ರಾವಣಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​: ನಿರ್ಮಾಪಕರೊಟ್ಟಿಗೆ ಮಾತನಾಡಿದ್ದ ಆಡಿಯೋ ಬಹಿರಂಗ!

    ಹೈದರಾಬಾದ್​: ಪ್ರಖ್ಯಾತ ಟಿವಿ ಧಾರಾವಾಹಿ ಮತ್ತು ಸಿನಿಮಾ ನಟಿ ಶ್ರಾವಣಿ ಕೊಂಡಪಲ್ಲಿ (26) ಆತ್ಮಹತ್ಯೆ ಪ್ರಕರಣ ಇದೀಗ ಹೊಸ ಆಯಾಮ ಪಡೆದುಕೊಂಡಿದ್ದು, ನಿರ್ಮಾಪಕರೊಟ್ಟಿಗೆ ಸಂಬಂಧ ಇತ್ತೆಂಬ ಹೊಸ ವಿಚಾರ ಹರಿದಾಡುತ್ತಿದೆ.

    ಮೃತ ಶ್ರಾವಣಿ ಮತ್ತು ಸಿನಿಮಾ ನಿರ್ಮಾಪಕ ಅಶೋಕ್​ ರೆಡ್ಡಿ ನಡುವೆ ನಡೆದಿದೆ ಎನ್ನಲಾದ ಫೋನ್​ ಕಾಲ್​ ಸಂಭಾಷಣೆಯ ಆಡಿಯೋ ಕ್ಲಿಪ್​ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

    ಆಡಿಯೋ ಕ್ಲಿಪ್​ನಲ್ಲಿ ಶ್ರಾವಣಿ ಮತ್ತು ಅಶೋಕ್​ ರೆಡ್ಡಿ ನಡುವಿನ ಸಂಬಂಧದ ಬಗ್ಗೆ ಉಲ್ಲೇಖವಾಗಿದೆ. ದೇವರಾಜ್​ ನನಗೆ ಕಿರುಕುಳ ನೀಡುತ್ತಿದ್ದಾರೆ. ನಿನ್ನ ಬಣ್ಣ ಬಯಲು ಮಾಡುತ್ತೇನೆಂದು ಬೆದರಿಕೆ ಹಾಕುತ್ತಿದ್ದಾನೆ. ನಾವಿಬ್ಬರು ಒಟ್ಟಿಗೆ ಇರುವುದನ್ನು ಅವನು ನೋಡಿದ್ದಾನಂತೆ ಎಂದು ಶ್ರಾವಣಿ, ಅಶೋಕ್​ ರೆಡ್ಡಿಗೆ ಹೇಳುತ್ತಿರುವುದು ಆಡಿಯೋದಲ್ಲಿ ಇದೆ.

    ಇದನ್ನೂ ಓದಿ: ಕೇವಲ 58 ಮತದಾರರ ಕಷ್ಟಸುಖ ಅರಿಯಲು 24 ಕಿ.ಮೀ ನಡೆದ ಸಿಎಂ ಯಾರು ಗೊತ್ತಾ?

    ಮಾನಸು ಮಮತಾ ಮತ್ತು ಮೌನರಾಗಂ ಸೇರಿದಂತೆ ವಿವಿಧ ಧಾರಾವಾಹಿಗಳಲ್ಲಿ ನಟಿಸಿರುವ ಶ್ರಾವಣಿ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್​ನ ಎಸ್​ಆರ್​ ನಗರ ಠಾಣಾ ವ್ಯಾಪ್ತಿಯ ಮಧುರನಗರ ಏರಿಯಾದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಅವರ ಕುಟುಂಬ ಟಿಕ್​ಟಾಕ್​ನಲ್ಲಿ ಪರಿಚಯವಾಗಿ ದೇವರಾಜ್​ ಎಂಬಾತ ನೀಡಿದ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಳೆಂದು ಆರೋಪಿಸಿದ್ದಾರೆ. ಇದೀಗ ಪೊಲೀಸರು ದೇವರಾಜ್​ ಬೆನ್ನುಬಿದ್ದಿದ್ದಾರೆ.

    ಇನ್ನು ಅಶೋಕ್​ ರೆಡ್ಡಿ, ಕಾರ್ತಿಕೇಯ ನಟನೆಯ ಯಶಸ್ವಿ ಆರ್​ಎಕ್ಸ್​ 100 ಚಿತ್ರದ ನಿರ್ಮಾಪಕರು. (ಏಜೆನ್ಸೀಸ್​)

    ಆತ್ಮಹತ್ಯೆಗೆ ಶರಣಾದ ಪ್ರಖ್ಯಾತ ಕಿರುತೆರೆ ನಟಿ: ಬಯಲಾಯ್ತು ಟಿಕ್​ಟಾಕ್​ ಗೆಳೆಯನ ಕರಾಳ ಮುಖ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts