More

    ಸಿಎಂ ಮಂಗಳೂರಿಗೆ ಬರುವ ದಿನವೇ ಸ್ಫೋಟ​ ಮಾಡಲು ಪ್ಲಾನ್​ ಮಾಡಿದ್ನಾ ಶಾರೀಕ್​?!

    ಹಾಸನ: ಆರೋಪಿ ಶಾರಿಕ್​ ಇಸ್ಲಾಮಿಕ್​ ಸ್ಟೇಟ್ಸ್​ ಮಾದರಿಯಲ್ಲೇ ಕುಕ್ಕರ್​ ಬಾಂಬ್​ ಹಿಡಿದು ನಿಂತ ಫೋಟೊ ಒಂದು ವೈರಲ್​ ಆಗಿತ್ತು. ಶಾರೀಕ್​ ಕೈಯಲ್ಲಿದ್ದ ಬಾಂಬ್​ಗೆ ಇಡೀ ಬಸ್​ ಸ್ಫೋಟ ಮಾಡುವ ಸಾಮರ್ಥ್ಯ ಇತ್ತು ಎನ್ನುವ ಮಾಹಿತಿ ತನಿಖಾ ಸಂಸ್ಥೆಗಳು ನಿಡಿದ್ದವು. ಮಂಗಳೂರಿನಲ್ಲಿ ಬಾಂಬ್​ ಅನ್ನು ಬೇರೆ ಜಾಗದಲ್ಲಿ ಪ್ಲಾಂಟ್​ ಮಾಡಲು ರಿಕ್ಷಾದಲ್ಲಿ ಶಾರಿಕ್​ ಸ್ಫೋಟಕ ತೆಗೆದುಕೊಂಡು ಹೋಗುತ್ತಿದ್ದ. ಆದರೆ ಅದು ರಿಕ್ಷಾ ಒಳಗಡೆಯೆ ಸ್ಫೋಟವಾಗಿ ರಿಕ್ಷಾ ಚಾಲಕ ಮತ್ತು ಉಗ್ರ ಇಬ್ಬರೂ ಗಾಯಗೊಂಡಿದ್ದರು.

    ಈಗ ಇನ್ನೊಂದು ಸ್ಫೋಟಕ ಮಾಹಿತಿ ಹೊರ ಬಿದ್ದಿದ್ದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ‘ಸಿಎಂ ಬರುವ ದಿನವೇ ಬ್ಲಾಸ್ಟ್​ ಮಾಡಬೇಕೆಂದು ಪ್ಲಾನ್ ಆಗಿತ್ತು ಎನ್ನುವ ಮಾಹಿತಿಯನ್ನು ಹೊರ ಹಾಕಿದ್ದಾರೆ.

    ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕೆ.ಗೋಪಾಲಯ್ಯ ‘ದೇವರ ದಯೆಯಿಂದ ಈ ಘಟನೆ ತಕ್ಷಣ ಪತ್ತೆಯಾಯಿತು.ಇಲ್ಲವಾದರೆ ದೊಡ್ಡ ಅಪಘಾತ ಆಗುತ್ತಿತ್ತು. ಸಿಎಂ ಬರುವ ದಿನವೇ ಬ್ಲಾಸ್ಟ್​ ಮಾಡಬೇಕೆಂದು ಪ್ಲಾನ್ ಆಗಿತ್ತು ಎನ್ನುವ ವಿಚಾರ ನಮ್ಮೆಲ್ಲರಿಗೂ ಆಘಾತ ತಂದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

    ‘ಘಟನೆ ಬಗ್ಗೆ ತಳಮಟ್ಟದಿಂದ‌ ತನಿಖೆ ಆಗುತ್ತಿದ್ದು ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ, ಉಗ್ರನಿಗೆ ಯಾರು ಆಶ್ರಯ ಕೊಟ್ಟಿದ್ದು ಎಲ್ಲವನ್ನು ಪೊಲೀಸರು ಭೇದಿಸಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಘಟನೆಯ ಹಿಂದೆ ಯಾವ ಸಂಸ್ಥೆ ಇದೆ ಎಂದು ಪತ್ತೆ ಹಚ್ಚಲಿದ್ದಾರೆ. ನಂತರ ಅದನ್ನು ಮಟ್ಟಹಾಕುವ ಕೆಲಸ ಕೂಡ ಆಗಲಿದೆ’ ಎಂದು ಸಚಿವರು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts