More

    ಮನೆಯಿಂದ ಅಂಚೆ ಮತ ಪತ್ರದ ಮೂಲಕ ಮತದಾನ – ಡಿಸಿ ಡಾ. ವಿಜಯಮಹಾಂತೇಶ ದಾನಮ್ಮನವರ

    ವಿಜಯಪುರ: ಜಿಲ್ಲೆಯ ಎಂಟು ವಿಧಾನಸಭಾ ಮತಕ್ಷೇತ್ರಗಳಲ್ಲಿ 80 ವರ್ಷ ಮೇಲ್ಪಟ್ಟ 3574, ವಿಶೇಷ ಚೇತನ 1078 ಮತದಾರರು ಮನೆಯಿಂದಲೇ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ ಒಟ್ಟು 38727 ಮತದಾರರು, 20273 ವಿಶೇಷ ಚೇತನ ಮತದಾರರಿಗೆ ಏ. 29ರಿಂದ ಮೇ 1ರವರೆಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ 80 ವರ್ಷ ಮೇಲ್ಪಟ್ಟ 3574, ವಿಶೇಷ ಚೇತನ 1078 ಮತದಾರರು ಮನೆಯಿಂದ ಅಂಚೆ ಮತ ಪತ್ರ ಮೂಲಕ ಮತದಾನ ಮಾಡಲಿದ್ದಾರೆ ಎಂದರು.

    ವಿಧಾನಸಭಾವಾರು ವಿವರದಂತೆ 80 ವರ್ಷ ಮೇಲ್ಪಟ್ಟ ಮುದ್ದೇಬಿಹಾಳ ಮತ ಕ್ಷೇತ್ರದಲ್ಲಿ 280, ದೇವರಹಿಪ್ಪರಗಿಯಲ್ಲಿ 441, ಬಸವನಬಾಗೇವಾಡಿಯಲ್ಲಿ 372, ಬಬಲೇಶ್ವರದಲ್ಲಿ 502, ವಿಜಯಪುರದಲ್ಲಿ 295, ನಾಗಠಾಣದಲ್ಲಿ 293, ಇಂಡಿಯಲ್ಲಿ 656 ಹಾಗೂ ಸಿಂದಗಿಯಲ್ಲಿ 735 ಮತದಾರರು ಸೇರಿ, 80 ವರ್ಷ ಮೇಲ್ಪಟ್ಟ ಒಟ್ಟು 3574 ಮತದಾರರು ಮನೆಯಿಂದ ಮತ ಚಲಾಯಿಸಲಿದ್ದಾರೆ ಎಂದರು.

    ಅದರಂತೆ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 142, ದೇವರಹಿಪ್ಪರಗಿಯಲ್ಲಿ 95, ಬಸವನಬಾಗೇವಾಡಿಯಲ್ಲಿ 141, ಬಬಲೇಶ್ವರದಲ್ಲಿ 123, ವಿಜಯಪುರದಲ್ಲಿ 30, ನಾಗಠಾಣದಲ್ಲಿ 45, ಇಂಡಿಯಲ್ಲಿ 371 ಹಾಗೂ ಸಿಂದಗಿಯಲ್ಲಿ 131 ಮತದಾರರು ಸೇರಿದಂತೆ ಒಟ್ಟು 1078 ವಿಶೇಷ ಚೇತನ ಮತದಾರರು ಮನೆಯಿಂದ ಮತ ಚಲಾಯಿಸಲು ಒಪ್ಪಿಗೆ ಸೂಚಿಸಿದ್ದು, ಈ ಮತದಾರರಿಗೆ ಮತದಾನಕ್ಕಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

    ಈಗಾಗಲೇ 80ಡಿ ರಡಿ ಅರ್ಜಿ ನೀಡಿರುವ ಜಿಲ್ಲೆಯ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನ ಮತದಾರರ ಮನೆ ಮನೆಗೆ ತೆರಳಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 30-ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ಹಿರಿಯ ನಾಗರಿಕರ ಮನೆಗೆ ಶನಿವಾರ ಭೇಟಿ ನೀಡಿ, 80 ವರ್ಷ ಮೇಲ್ಪಟ್ಟ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
    ಚುನಾವಣಾ ಸಿಬ್ಬಂದಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿದ ಅವರು, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವವರು ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಅನುಮಾನ ಬಂದಲ್ಲಿ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.
    ಮನೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಸೆಕ್ಟರ್ ಅಧಿಕಾರಿಗಳು, ಪ್ರಿಸೈಡಿಂಗ್ ಅಧಿಕಾರಿ, ಮೈಕ್ರೋ ಆಬ್ಜರ್ವರ್, ಮತಗಟ್ಟೆ ಅಧಿಕಾರಿ, ಪೊಲೀಸ್ ಸಿಬ್ಬಂದಿ, ವಿಡಿಯೋಗ್ರಾಫರ್, ಬಿಎಲ್ಎಗಳು ಉಪಸ್ಥಿತಿಯಲ್ಲಿ ಮತದಾನ ಪ್ರಕ್ರಿಯೆ ಜರುಗಲಿದೆ.

    ಸಾಮಾನ್ಯ ವೀಕ್ಷಕರ ಭೇಟಿ

    ವಿಜಯಪುರ ನಗರ ವಿಧಾನಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಉದಿತ್ ಪ್ರಕಾಶ ರಾಯ್ 80 ವರ್ಷ ಮೇಲ್ಪಟ್ಟ ಮತದಾರರ ಮನೆಗೆ ಶನಿವಾರ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿ, ಸಿಬ್ಬಂದಿಗಳಿಗೆ ಅಗತ್ಯ ಸಲಹೆ- ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಗಳಾದ ಬಿಜಾಪುರ ನಗರ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts