More

    ಶ್ರೀರಂಗಪಟ್ಟಣದಲ್ಲಿ ಮತದಾನ ಜಾಗೃತಿ

    ಶ್ರೀರಂಗಪಟ್ಟಣ: ಏ.26ರಂದು ನಡೆಯುವ ಲೋಕಸಭಾ ಚುನಾವಣೆ ದಿನದಂದು ಪ್ರತಿಯೊಬ್ಬರೂ ಮತಗಟ್ಟೆಗೆ ತೆರಳಿ ಕಡ್ಡಾಯ ಮತದಾನ ಮಾಡುವಂತೆ ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜು ಹಾಗೂ ಅಚೀವರ್ಸ್ ಅಕಾಡೆಮಿ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು.

    ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ರಾಷ್ಟ್ರಪ್ರಶಸ್ತಿ ವಿಜೇತ ಎನ್ನೆಸ್ಸೆಸ್ ಅಧಿಕಾರಿ ಡಾ.ರಾಘವೇಂದ್ರ ಅವರ ನೇತೃತ್ವದಲ್ಲಿ ತೆರಳಿದ ವಿದ್ಯಾರ್ಥಿಗಳು ಮತದಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜತೆಗೆ ಮಾನವ ಸರಪಳಿ ರಚಿಸಿ ಮತದಾನ ಪ್ರತಿಜ್ಞೆಯನ್ನು ಬೋಧಿಸಿದರು. ಬಳಿಕ ಬೈಕ್ ರಾಲಿ ನಡೆಸುವ ಮೂಲಕ ಪಟ್ಟಣ ಸೇರಿದಂತೆ ತಾಲೂಕಿನ ಬಾಬುರಾಯನಕೊಪ್ಪಲು, ಶ್ರೀನಿವಾಸ ಅಗ್ರಹಾರ, ಕರಿಘಟ್ಟ, ಗಂಜಾಂ ಸೇರಿದಂತೆ ಹಲವು ಕಡೆ ಮತದಾನದ ಜಾಗೃತಿಯ ಘೋಷ ವಾಖ್ಯಗಳನ್ನು ಕೂಗಿದರು.

    ವಿದ್ಯಾರ್ಥಿಗಳಾದ ಗುರುಮೂರ್ತಿ ಭಟ್, ದೀಕ್ಷಿತ್, ಧನುಷ್, ರಾಜೇಶ್, ನವೀನ್, ದಿವಿತ್, ವಿನಯ್, ಮುರಳಿ, ಶ್ರೀಹರಿ, ಇಂಚರ, ನಿವೇದಿತಾ, ಅನನ್ಯ ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಸೇರಿದಂತೆ ಹಲವರು ಈ ಜಾಥಾದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts