ಜಮಖಂಡಿ: ನಗರದ ಬಸ್ ನಿಲ್ದಾಣದಲ್ಲಿ ಎನ್ಡಬ್ಲ್ಯೂಎಸ್ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಶಿಬಿರ ಮತ್ತು ಲೋಕಸಭಾ ಮತದಾನ ಜಾಗೃತಿ ಅಭಿಯಾನ ನಡೆಯಿತು.
ಪ್ರಯಾಣಿಕರು ಹಾಗೂ ವಾಹನ ಚಾಲಕರು, ನಿರ್ವಾಹಕರು, ಮೆಕ್ಯಾನಿಕಲ್ ಸೇರಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಾಯಿತು.
ತಾಪಂ ಇಒ ಭಾರತಿ ಚೆಲುವಯ್ಯ, ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ. ತಾಲೂಕು ಆರೋಗ್ಯ ಅಧಿಕಾರಿ ಡಾ.ಜಿ.ಎಸ್. ಗಲಗಲಿ, ಡಾ. ವಿದ್ಯಾಶ್ರೀ, ಡಾ. ಭರತೇಶ ಪರಮಗೊಂಡ, ಡಾ.ಪ್ರಕಾಶ ಮುಚಂಡಿ, ಆರೋಗ್ಯ ನಿರೀಕ್ಷಕ ಉಮೇಶ ಜೋಶಿ ಇದ್ದರು.
ರಕ್ತದ ಒತ್ತಡ. ಸಕ್ಕರೆ ಕಾಯಿಲೆ ಹಾಗೂ ಆರೋಗ್ಯ ತಪಾಸಣೆ ಮಾಡುವ ಮೂಲಕ ಮಾತ್ರೆಗಳನ್ನು ನೀಡಲಾಯಿತು.