ಕಾರ್ಗಲ್: ಇಲ್ಲಿನ ಬಿದರೂರು ವರ್ಧಮಾನ ದಿಗಂಬರ ಜೈನ ಬಸದಿಯಲ್ಲಿ ಶಿವಮೊಗ್ಗದ ರೆಡ್ಕ್ರಾಸ್ ಸಂಜೀವಿನಿ ರಕ್ತನಿಧಿ ಸಂಸ್ಥೆ ಸಹಯೋಗದಲ್ಲಿ 2ನೇ ವರ್ಷದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. 50 ಮಂದಿ ರಕ್ತದಾನ ಮಾಡಿದರು. ರೆಡ್ಕ್ರಾಸ್ ಸಂಜೀವಿನಿ ರಕ್ತನಿಧಿ ಸಂಸ್ಥೆಯ ಸಂಚಾಲಕ ಧರಣೇಂದ್ರ ದಿನಕರ್, ಡಾ. ದಿನಕರ್, ತಾಲೂಕು ಜೈನ ಸಮಾಜದ ಅಧ್ಯಕ್ಷ ಲೋಕರಾಜ್, ಬಿದರೂರು ಜೈನ ಬಸದಿ ಸಮಿತಿ ಅಧ್ಯಕ್ಷ ಶಾಂತರಾಜ್ ನೇಸಲಮನೆ, ತಾಲೂಕು ಕಾರ್ಯದರ್ಶಿ ನವೀನ್ ದಾರಿಗದ್ದೆ, ಉಪಾಧ್ಯಕ್ಷ ಚೂಡಾರತ್ನ ಹತ್ತಿಗೋಡು, ಕಾರ್ಯದರ್ಶಿ ಲೋಕರಾಜ್ ವಡನಬೈಲು, ಪ್ರಮುಖರಾದ ಧನಪಾಲ ಹಳಬಳ್ಳಿ, ವಿದ್ಯಾಧರ ಇಂದ್ರ, ಪ್ರದೀಪ್ ಬಿದರೂರು, ಸಚಿನ್, ಮೋಹನ್ ಇತರರಿದ್ದರು.