ರಾಂಚಿ: ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಸರಣಿಯಲ್ಲಿ 4ನೇ ಟೆಸ್ಟ್ ಪಂದ್ಯವನ್ನು 5 ವಿಕೆಟ್ ಗಳಿಂದ ಟೀಂ ಇಂಡಿಯಾ ಗೆದ್ದು ಬೀಗಿದೆ. ಈ ಗೆಲುವಿನ ಮೂಲಕ ಸರಣಿಯನ್ನು ಈಗಾಗಲೇ 3-1ರಿಂದ ಕೈವಶ ಮಾಡಿಕೊಂಡಿದೆ. ಅಲ್ಲದೇ ಈ ಸರಣಿ ಗೆಲುವಿನೊಂದಿಗೆ ಹೊಸ ದಾಖಲೆ ನಿರ್ಮಿಸಿದೆ.
ಇದನ್ನೂ ಓದಿ:ಪೇಟಿಎಂ ಷೇರು ಅಪ್ಪರ್ ಸರ್ಕ್ಯೂಟ್ ಹಿಟ್: ಪಾತಾಳ ಕಂಡ ಸ್ಟಾಕ್ ಬೆಲೆ ಮತ್ತೆ ಏರುಗತಿಗೆ ಮರಳಲು 2 ಪ್ರಮುಖ ಕಾರಣ
ಈ ಮೂಲಕ ಭಾರತ ತಂಡ ತವರು ನೆಲದಲ್ಲಿ ಸತತ 17ನೇ ಟೆಸ್ಟ್ ಸರಣಿಯನ್ನು ಗೆದ್ದಂತಾಗಿದೆ. ಈ ಮೂಲಕ ಭಾರತ ಕ್ರಿಕೆಟ್ ತಂಡವು ತವರು ನೆಲದಲ್ಲಿ ಸತತವಾಗಿ ಅತಿ ಹೆಚ್ಚು ಟೆಸ್ಟ್ ಸರಣಿ ಜಯಗಳ ದಾಖಲೆಯನ್ನು ವಿಸ್ತರಿಸಿದೆ. ಕಳೆದ 12 ವರ್ಷಗಳಿಂದ ಭಾರತ ತಂಡವನ್ನು ಭಾರತದಲ್ಲಿಯೇ ಸೋಲಿಸಿರುವ ಮತ್ತೊಂದು ತಂಡ ಇಲ್ಲವಾಗಿದೆ.
A fantastic victory in Ranchi for #TeamIndia 😎
India clinch the series 3⃣-1⃣ with the final Test to be played in Dharamsala 👏👏
Scorecard ▶️ https://t.co/FUbQ3MhXfH#INDvENG | @IDFCFIRSTBank pic.twitter.com/5I7rENrl5d
— BCCI (@BCCI) February 26, 2024
ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಎರಡನೇ ಮಗುವನ್ನು ಸ್ವಾಗತಿಸಿದ್ದರು. ಫೆಬ್ರವರಿ 15 ರಂದು ಗಂಡು ಮಗುವನ್ನು ಜನಿಸಿರುವುದಾಗಿ ದಂಪತಿಗಳು ಘೋಷಿಸಿ, ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದೇವೆ ಎಂದು ಬಹಿರಂಗಪಡಿಸಿದ್ದರು.
ಈ ಕಾರಣದಿಂದ ಕೊಹ್ಲಿ ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದರು. ಇದೀಗ ಟೀಂ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಹಾಕುವ ಮೂಲಕ ಕ್ರಿಕೆಟ್ ಪ್ರಿಯರ ಮನಸ್ಸು ಗೆದ್ದಿದ್ದಾರೆ. ವಿರಾಟ್ ಪೋಸ್ಟ್ ಮಾಡಿದ ಸೋಷಿಯಲ್ ಮೀಡಿಯಾ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಎಸ್..! ಯುವ ತಂಡದಿಂದ ಅದ್ಭುತ ಸರಣಿ ವಿಜಯವಿದು. ನಮ್ಮ ಯುವ ಪಡೆ ಧೈರ್ಯ, ದೃಢತೆ ಹಾಗೂ ಬದ್ಧತೆಯನ್ನು ತೋರಿದೆ” ಎಂದು ಕೊಹ್ಲಿ ತಮ್ಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
YES!!! 🇮🇳
Phenomenal series win by our young team. Showed grit, determination and resilience.@BCCI— Virat Kohli (@imVkohli) February 26, 2024
ಪಂದ್ಯದ 2ನೇ ಇನಿಂಗ್ಸ್ನಲ್ಲಿ ಭಾರತ ತಂಡ 192 ರನ್ಗಳ ಗುರಿ ಪಡೆದಿತ್ತು. ನಾಲ್ಕನೇ ದಿನದಾಟದ ಆರಂಭದಲ್ಲಿ ಭಾರತ ತಂಡಕ್ಕೆ ಕೈಲಿದ್ದ 10 ವಿಕೆಟ್ಗಳಲ್ಲಿ 152 ರನ್ಗಳ ಅಗತ್ಯವಿತ್ತು. ಆದರೆ, ಸೆಟ್ ಬ್ಯಾಟರ್ಗಳಾದ ರೋಹಿತ್ ಶರ್ಮಾ (55) ಮತ್ತು ಯಶಸ್ವಿ ಜೈಸ್ವಾಲ್ ವಿಕೆಟ್ ಪತನದ ಬಳಿಕ ಭಾರತ ತಂಡ 120ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
6ನೇ ವಿಕೆಟ್ಗೆ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತ ಶುಭಮನ್ ಗಿಲ್ (ಅಜೇಯ 52) ಮತ್ತು ಧ್ರುವ್ ಜುರೆಲ್ (ಅಜೇಯ 39) ಮನಮೋಹಕ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು.
ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ಗೆ ದೊಡ್ಡ ಹೊಡೆತ, ಬಿಜೆಪಿ ಸೇರಿದ ಹಿರಿಯ ನಾಯಕಿ