More

    ಕುಡಿಯುವ ನೀರಿಗಾಗಿ ಗ್ರಾಮಸ್ಥರ ಅಲೆದಾಟ

    ಕಳಸ: ಕುಡಿಯಲು ನೀರಲ್ಲದೆ ಪರದಾಡುವಂತಾಗಿದೆ ಎಂದು ತಾಲೂಕಿನ ತೋಟದೂರು ಗ್ರಾಪಂ ವ್ಯಾಪ್ತಿಯ ತನೂಡಿ ಗ್ರಾಮದ ಅಳಗೋಡು ವಾಸಿಗಳು ಆರೋಪಿಸಿದ್ದಾರೆ.

    ಈ ಗ್ರಾಮದಲ್ಲಿ ಸುಮಾರು 60 ಮನೆಗಳಿವೆ. ಇಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಿದ್ದ ನೀರಿನ ಟ್ಯಾಂಕ್ ನೀರಿಲ್ಲದೇ ಒಣಗುತ್ತಿದೆ. ಮೂರು ಕಿ.ಮೀ. ದೂರದಿಂದ ಟ್ಯಾಂಕ್‌ಗೆ ಪೈಪ್‌ಲೈನ್ ಅಳವಡಿಸಿದ್ದು, ಕಾಡು ಪ್ರಾಣಿಗಳ ದಾಳಿಯಿಂದ ಪೈಪ್‌ಲೈನ್ ಹಾಳಾಗಿದೆ. ಅಲ್ಲದೆ ಪೈಪ್‌ಲೈನ್ ಅಳವಡಿಸಿದ್ದ ಹಳ್ಳದಲ್ಲೂ ನೀರು ಬತ್ತಿ ಹೋಗಿದೆ. ಕುಡಿಯುವ ನೀರಿಗಾಗಿ ಕಗ್ಗನಳ್ಳದಲ್ಲಿ ರಿಂಗ್ ಬಾವಿ ನಿರ್ಮಿಸಲಾಗಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಕುಡಿಯುವ ನೀರಿಗಾಗಿ ಸಾಕಷ್ಟು ಕಾಮಗಾರಿಗಳನ್ನು ನಡೆಸಲಾಗಿದೆ. ಆದರೆ ಯಾವುದೇ ಕಾಮಗಾರಿಯನ್ನು ಸರಿಯಾಗಿ ನಡೆಸದೆ ಬಿಲ್ ತೆಗೆದುಕೊಳ್ಳಲಾಗಿದೆ ಹೊರತು ಗ್ರಾಮಕ್ಕೆ ಒಂದು ಹನಿ ನೀರು ಬರುತ್ತಿಲ್ಲ ಎಂದು ದೂರಿದ್ದಾರೆ.
    ಇದರಿಂದ ನಮ್ಮ ಗ್ರಾಮದಲ್ಲಿರುವ ಕುಟುಂಬಗಳಿಗೆ ಕುಡಿಯವ ನೀರಿಗಾಗಿ ಪರಿತಪಿಸುವಂತಾಗಿದೆ. ಕೂಡಲೇ ನಮಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಗ್ರಾಮಸ್ಥರಾದ ಶ್ರೀನಿವಾಸ, ಮೀನಾಕ್ಷಿ, ಚಂದ್ರಕಲಾ, ಕೃಷ್ಣೇಗೌಡ, ಪರಮೇಶ್ವರ, ಉಮೇಶ, ರತನ್, ನಾಗೇಶ, ದೇವಪ್ಪ, ಮಧುಸೂದನ್ ಇತರರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts