More

    ಮರುಚುನಾವಣೆಗೆ ಗ್ರಾಮಸ್ಥರ ಆಗ್ರಹ

    ರೋಣ: ಭಾನುವಾರ ನಡೆದ ಗ್ರಾಪಂ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರ ಭಾವಚಿತ್ರವಿರುವ ಮತದಾರರ ಚೀಟಿಗಳನ್ನು ಮತದಾನ ಕೇಂದ್ರಗಳಲ್ಲಿ ವಿತರಿಸಲಾಗಿದೆ ಎಂದು ಆರೋಪಿಸಿ ಡ.ಸ. ಹಡಗಲಿ ಗ್ರಾಮಸ್ಥರು ತಹಸೀಲ್ದಾರ್ ಪಿ.ಎಸ್. ಕುಂಬಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಡ.ಸ. ಹಡಗಲಿ ಗ್ರಾಮದ ಮುಖಂಡ ಎಸ್.ಎಸ್. ಮೇಟಿ ಮಾತನಾಡಿ, ಗ್ರಾಪಂ ಚುನಾವಣೆ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಚಿವ ಸಿ.ಸಿ. ಪಾಟೀಲ ಅವರ ಭಾವಚಿತ್ರವಿರುವ ರಸೀದಿಯಲ್ಲಿ ಮತದಾರರ ಹೆಸರು, ವಾರ್ಡ್ ಸಂಖ್ಯೆ ಹಾಕಿ ಮತದಾನ ಕೇಂದ್ರದ ಮುಂದೆ ವಿತರಿಸಿದ್ದರು. ಆದರೆ, ಚುನಾವಣೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಚುನಾವಣೆ ಆಯೋಗಕ್ಕೂ ದೂರು ನೀಡಲಾಗಿದೆ. ಡ.ಸ. ಹಡಗಲಿ ಗ್ರಾಮಕ್ಕೆ ಮರುಚುನಾವಣೆ ಮಾಡಬೇಕು ಎಂದು ಆಗ್ರಹಿಸಿದರು.

    ಅಡಿವೆಪ್ಪ ಶೆಟಿಗೆಣ್ಣವರ, ಮಕ್ತು ಮಸಾಬ್ ಮುಲ್ಲಾ, ಪ್ರಶಾಂತ ಪಾಟೀಲ, ಮಲ್ಲು ಮಲ್ಲಾಪುರ, ಬಸವರಾಜ ಗೌರಿ, ರಮೇಶ ಕಂಪ್ಲಿ, ಅರುಣಕುಮಾರ ತಳವಾರ, ಮುತ್ತಪ್ಪ ಕಂಪ್ಲಿ, ಶರಣಪ್ಪ ಕುರಿ, ಮಂಜು ದೊಡ್ಡಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts