More

    ರಾಮ ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಿ

    ವಿಜಯಪುರ: ನಿಧಿ ಸಮರ್ಪಣೆ ಮೂಲಕ ಸಮಸ್ತ ಹಿಂದುಗಳು ರಾಮ ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಹೇಳಿದರು.
    ನಗರದ ಸಿದ್ಧೇಶ್ವರ ದೇವಸ್ಥಾನ, ಶಂಕರಲಿಂಗ ದೇವಸ್ಥಾನ, ಅಂಬಾಭವಾನಿ ದೇವಸ್ಥಾನ, ವಜ್ರ ಹನುಮಾನ ನಗರ ಹಾಗೂ ರಾಘವೇಂದ್ರ ಮಠದಿಂದ ಶುಕ್ರವಾರ ಏಕ ಕಾಲದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿಧಿ ಸಮರ್ಪಣೆ ಅಭಿಯಾನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಯೋಜನೆಯ ಅನ್ವಯ ಸಮಸ್ತ ಹಿಂದು ಸಮಾಜದಿಂದ ಮಂದಿರ ನಿರ್ಮಾಣಕ್ಕಾಗಿ ಧನ ಸಮರ್ಪಣೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಮ ಮಂದಿ ಕೆಲಸ ಭರದಿಂದ ಸಾಗಿದೆ. ಆ ಮೂಲಕ 500 ವರ್ಷಗಳ ಕನಸು ನನಸಾಗುತ್ತಿದೆ. ಲಕ್ಷಾಂತರ ಜನರ ತ್ಯಾಗ, ಬಲಿದಾನದ ಪ್ರತಿಫಲವಾಗಿ ಮಂದಿರ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಹಿಂದುಗಳು ಧನ ಸಹಾಯ ಮಾಡುವ ಮೂಲಕ ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕೆಂದರು.

    ಕಾತ್ರಾಳದ ಅಮೃತಾನಂದ ಸ್ವಾಮೀಜಿ ಮಾತನಾಡಿ, ರಾಮ ಮಂದಿರ ಹಿಂದುಗಳ ಸ್ವಾಭಿಮಾನದ ಪ್ರತೀಕ. ಈ ದೇಶದ ಸನಾತನ ಸಂಸ್ಕೃತಿಯ ಹೆಮ್ಮೆ. ಹೀಗಾಗಿ ಸರ್ವರೂ ಈ ಸನಾತನ ಸಂಸ್ಕೃತಿ ಎತ್ತಿ ಹಿಡಿಯಲು ಕೈ ಜೋಡಿಸಬೇಕೆಂದರು. ವಿಭಾಗ ಪ್ರಚಾರಕ ದಯಾನಂದ ಜಿ. ಮಾತನಾಡಿ, 2.7 ಎಕರೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. 67 ಎಕರೆ ಪ್ರಮುಖ ಪ್ರದೇಶದಲ್ಲಿ ಇತರ ಕಟ್ಟಡಗಳು ನಿರ್ಮಾಣವಾಗಲಿದೆ. ಈ ಮಂದಿರವನ್ನು ಸಾರ್ವಜನಿಕರ ಹಣದಿಂದ ಕಟ್ಟಬೇಕು. ಇದಕ್ಕಾಗಿಯೇ ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಆಗುತ್ತಿದೆ. ಈ ಅಭಿಯಾನ ಹಾಗೂ ಮಂದಿರ ನಿರ್ಮಾಣ ಕೇವಲ ಮತ್ತೊಂದು ನಿರ್ಮಾಣದಂತೆ ಅಲ್ಲ. ಇದು ಜಾಗೃತ ಹಿಂದು ಶಕ್ತಿಯ ಪುನರುತ್ಥಾನದ ಸಂಕೇತ. ಸಮಾಜವನ್ನು ಮೇಲು ಕೀಳು ಎಂಬ ಭಾವನೆಗಳಿಂದ ಮುಕ್ತಗೊಳಿಸುವ ಬಡತನ, ಆರೋಗ್ಯ, ಶಿಕ್ಷಣ, ಕೌಶಲದ ನ್ಯೂನ್ಯತೆಗಳನ್ನು ನಿರ್ಮೂಲನೆಗೊಳಿಸುವ ಮಹಿಳೆಯರ ಘನತೆಯನ್ನು ಮರು ಸ್ಥಾಪಿಸುವ ಭಯೋತ್ಪಾದನೆಯ ಉಪದ್ರವವನ್ನು ನಿರ್ಮೂಲನೆ ಮಾಡುವ ವೇದದ ಗುರಿಯಾದ ಸರ್ವೇ ಭವಂತೂ ಸುಃಖಿನಃ ಅಂದರೆ ಎಲ್ಲರೂ ಸಂತೋಷವಾಗಿರಲಿ ಎಲ್ಲರೂ ಆರೋಗ್ಯವಾಗಿರಲಿ ಯಾರೂ ದುಃಖದಿಂದ ಬಳಲದಿರಲಿ ಎಂಬ ಉದ್ದೇಶದಿಂದ ಕೂಡಿದೆ. ಈ ನಿಧಿ ಸಮರ್ಪಣ ಕಾರ್ಯ ಯಶಸ್ವಿಯಾಗಿ ನಡೆಯಲಿ ಎಂದರು.

    ಆರ್‌ಎಸ್‌ಎಸ್‌ಎಸ್‌ನ ನಗರ ಕಾರ್ಯವಾಹ ಸಂಜೀವ ಜೋಶಿ ಮಾತನಾಡಿ, ಅಯೋಧ್ಯೆಯಲ್ಲಿನ ಮಂದಿರ ನಿರ್ಮಾಣಕ್ಕಾಗಿ ಅನುವಾಗುವಂತೆ 4 ಲಕ್ಷ ಹಳ್ಳಿಗಳನ್ನು 12 ಕೋಟಿ ಕುಟುಂಬಗಳನ್ನು ತಲುಪಲಿದ್ದಾರೆ. ಕರ್ನಾಟಕದಲ್ಲಿ 27,500 ಹಳ್ಳಿಗಳನ್ನು ತಲುಪುವ ಯೋಜನೆಯನ್ನು ವಿಶ್ವ ಹಿಂದು ಪರಿಷತ್ ಹಾಕಿಕೊಂಡಿದೆ ಎಂದರು.
    ಪೂಜ್ಯ ಶ್ರದ್ಧಾನಂದ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಬಸಯ್ಯ ಹಿರೇಮಠ, ಸುನೀಲ ಭೈರವಾಡಗಿ ಮಾತನಾಡಿದರು.
    ವಿಭಾಗ ಪ್ರಮುಖ ರಾಮಸಿಂಗ ಹಜೇರಿ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ಸಂಕೇತ ಬಗಲಿ, ಉಮೇಶ ಕಾರಜೋಳ, ಪವನ ಜೋಶಿ, ಚಂದ್ರಶೇಖರ ಕವಟಗಿ, ಭೀಮಾಶಂಕರ ಹದನೂರ, ವಿವೇಕಾನಂದ ಡಬ್ಬಿ, ಅಶೋಕ ಕೊಡಗಾನೂರ, ಶಿವರುದ್ರ ಬಾಗಲಕೋಟ, ಅಶೋಕ ಹಾವಣ್ಣವರ, ಸಿದ್ದು ಕರಲಗಿ, ಗುರು ಗಚ್ಚಿನಮಠ, ವಿಜಯ ಜೋಶಿ, ವಿಕಾಸ ಪದಕಿ, ಗೋಪಾಲ ಘಟಕಾಂಬಳೆ, ರಾಜು ಮಗಿಮಠ, ಬಸವರಾಜ ಹುಣಶ್ಯಾಳ, ಲಕ್ಷ್ಮಿ ಹೂಗಾರ, ರವಿಕಾಂತ ಬಗಲಿ, ಭುವನೇಶ್ವರಿ ಕೋರವಾರ, ಭಾರತಿ ಭುಂಯ್ಯರ, ಮಲ್ಲಮ್ಮ ಜೋಗುರ, ಭರತ ಕೋಳಿ, ಗೋವಿಂದ ದಶವಂತ, ಪ್ರವೀಣ ಭಾತಕಂಡಿ, ಮನೋಜ ಗಿರಗಾಂವಿ, ಕೇಶವ ತೋಳಬಂದಿ, ನೀಲಕಂಠ ವಾಲೀಕಾರ, ಪಾಪುಸಿಂಗ ರಜಪೂತ, ಸಂಗಮೇಶ ಬಿರಾದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts