ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕಗಾಗಿ ಪಂಚಮಸಾಲಿ ಸಮಾಜ ಬಾಂಧವರು ಒಗ್ಗಟ್ಟು ಪ್ರದರ್ಶಿಸಬೇಕೆಂದು ಜಿಲ್ಲಾಧ್ಯಕ್ಷ ಭೀಮನಗೌಡ ಬಿರಾದಾರ ಹೇಳಿದರು.
ತಿಕೋಟಾ ತಾಲೂಕಿನ ದಾಶ್ಯಾಳ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಂಚಮಸಾಲಿ ನಡಿಗೆ ಹಳ್ಳಿಯ ಕಡೆಗೆ ಯುವಕರ ನಡಿಗೆ ಸಂಘಟನೆ ಕಡೆಗೆ ಹಾಗೂ ಸಮಾಜದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ನೌಕರ ಘಟಕದ ಅಧ್ಯಕ್ಷ ಶಶಿಧರ ಸಾತಲಗಾವ, ಸಂತೋಷ ಜಾಲಿಹಾಳ, ಸಾಗರ ಬೇನೂರ, ವಿಜು ಪಾಟೀಲ, ಆನಂದ ಜಂಬಗಿ ಮತ್ತಿತರರಿದ್ದರು.