ವಿಜಯಪುರ: ತಿಕೋಟಾ ಬಳಿಯ ರತ್ನಾಪುರ ಕ್ರಾಸ್ ಬಳಿ ಶನಿವಾರ ಮಧ್ಯಾಹ್ನ ಬೈಕ್ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ.
ತಿಕೋಟಾ ಪಟ್ಟಣದ ನಿವಾಸಿ ಬಸವರಾಜ ಬಡಿಗೇರ (23) ಮೃತ ಯುವಕ. ತಿಕೋಟಾದಿಂದ ವಿಜಯಪುರಕ್ಕೆ ರಾಯಲ್ ಎನ್ಫೀಲ್ಡ್ ಮೇಲೆ ಹೊರಟಿದ್ದ ಸಂದರ್ಭ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಸವರಾಜನನ್ನು ವಿಜಯಪುರದ ಬಿಎಲ್ಡಿಇ ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ. ತಿಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*