More

    ಜಾತಿವಾದಿ ನ್ಯಾಯಾಧೀಶರಿಂದ ದೇಶಕ್ಕೆ ಅಪಾಯ

    ವಿಜಯಪುರ: ಡಾ. ಬಾಬಾಸಾಹೇಬ ಅಂಬೇಡ್ಕರ್‌ರ ಭಾವಚಿತ್ರ ತೆಗೆದು ಹಾಕಿಸಿ ಮಹಾನ್ ನಾಯಕರಿಗೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶರನ್ನು ತಕ್ಷಣ ಅಮಾನತು ಮಾಡಿ, ಕಠಿಣ ಶಿಕ್ಷೆಗೆ ಗುರಿಪಡಿಸಲು ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾ ಸಂಚಾಲಕ ಚಂದ್ರಕಾಂತ ಎಂ. ಸಿಂಗೆ ಮಾತನಾಡಿ, ರಾಯಚೂರಿನಲ್ಲಿ 73ನೇ ಗಣರಾಜ್ಯೋತ್ಸವದ ಆಚರಣೆ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಬಾಬಾಸಾಹೇಬ ಅಂಬೇಡ್ಕರ್ ಭಾವಚಿತ್ರ ಇಟ್ಟು ಧ್ವಜಾರೋಹಣ ಮಾಡಲು ಜಿಲ್ಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಕರೆದಾಗ ಸ್ಥಳಕ್ಕೆ ಬಂದ ಜಿಲ್ಲಾ ನ್ಯಾಯಾಧೀಶರು ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರ ತೆಗೆದರೆ ಮಾತ್ರ ಧ್ವಜಾರೋಹಣ ಮಾಡುತ್ತೇನೆ ಎಂದು ಹಠ ಹಿಡಿದು ಅಂಬೇಡ್ಕರ್ ಭಾವಚಿತ್ರ ತೆಗೆಸಿದ ನ್ಯಾಯಾಧೀಶರ ನಡತೆಯನ್ನು ಇಡೀ ಮಾನವ ಕುಲಕ್ಕೆ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದ್ದು ಖಂಡನೀಯ. ಇಂತಹ ನ್ಯಾಯಾಧೀಶರಿಂದ ಕಾನೂನು ಕಾಪಾಡಲು ಹೇಗೆ ಸಾಧ್ಯ?. ಇಂತಹ ಜಾತಿವಾದಿ ನ್ಯಾಯಾಧೀಶರುಗಳಿಂದ ದೇಶಕ್ಕೆ ಅಪಾಯ. ಆದ್ದರಿಂದ ಕೋಮುವಾದಿ ಮನಸ್ಥಿತಿಯ ಜಾತಿವಾದಿ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ಕೂಡಲೇ ಹೈಕೋರ್ಟ್ ವಜಾ ಮಾಡಬೇಕು. ಹಾಗೂ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿದರು.

    ಮುಖಂಡರಾದ ರಾಹುತ ತಳಕೇರಿ, ಶಿವಯೋಗಿ ಕಳ್ಳೊಳ್ಳಿ, ಗುರುರಾಜ ಗುಡಿಮನಿ, ಚಂದು ಕಟ್ಟಿಮನಿ, ಸಂತೋಷ ತಳಕೇರಿ, ಈಶ್ವರ ಚಲವಾದಿ, ಈಶ್ವರ ಬಡಿಗೇರ, ರಮೇಶ ಹುಚ್ಚಾಳ, ಮಲಕು ಸಿಂಗೆ, ಲಗಮು ಕಕ್ಕಳಮೇಲಿ, ಸಾಯಬಣ್ಣ ದಳಪತಿ, ಬಸವರಾಜ ತಳಕೇರಿ, ಪರಶುರಾಮ ಕುಬಕಡ್ಡಿ, ನಬಿಸಾಬ ಬಿರಾದಾರ, ಚಂದ್ರಶೇಖರ ನಾಲತವಾಡ, ಯಮನಪ್ಪ ಚಲವಾದಿ ಮುಂತಾದವರು ಭಾಗವಹಿಸಿದ್ದರು.

    ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯ
    ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ತಕ್ಷಣ ಅಮಾನತು ಮಾಡಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ನೇತೃತ್ವದಲ್ಲಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

    ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ, ಸಮಿತಿ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡಿ, ನ್ಯಾಯಾಧೀಶರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
    ರಮೇಶ ಆಸಂಗಿ, ವೈ.ಸಿ. ಮಯೂರ, ಅಶೋಕ ಚಲವಾದಿ, ರಮೇಶ ದರಣಾಕರ, ಪರಶುರಾಮ ದಿಂಡವಾರ, ವಿಜಯಕುಮಾರ ಕಾಂಬಳೆ, ಪ್ರಕಾಶ ಗುಡಿಮನಿ, ರೇವಣಸಿದ್ದ ಮಸಳಿಕೆರಿ, ರಾಜು ತೊರವಿ, ಪ್ರಶಾಂತ ತೊರವಿ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts