More

    ಸಂವಿಧಾನ ತಿದ್ದುವ ಹುನ್ನಾರ ಸಲ್ಲ

    ವಿಜಯಪುರ: ಇಂದಿನ ದಿನಗಳಲ್ಲಿ ದೇಶವನ್ನಾಳುತ್ತಿರುವ ಜನಪ್ರತಿನಿಧಿಗಳು ಸಂವಿಧಾನದ ಆಶಯವನ್ನು ತಿದ್ದುವ ಹುನ್ನಾರ ಮಾಡುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಅಡಿವೆಪ್ಪ ಸಾಲಗಲ್ ತಿಳಿಸಿದರು.
    ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಶ್ರಮಪಟ್ಟು ಸರ್ವರಿಗಾಗಿ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪವಿತ್ರವಾದ ಸಂವಿಧಾನ ರಚಿಸಿ ಈ ದೇಶಕ್ಕೆ ಸಮರ್ಪಿಸಿದ್ದಾರೆ. ಆದರೆ ಇಂದು ದೇಶವನ್ನಾಳುತ್ತಿರುವವರು ಸಂವಿಧಾನ ಬದಲಿಸುವ ಮೂರ್ಖತನದ ಮಾತುಗಳನ್ನಾಡುತ್ತಿರುವುದು ಸರಿಯಲ್ಲ. ಸಂವಿಧಾನವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಅನ್ನುವುದನ್ನು ಅರಿತುಕೊಳ್ಳಬೇಕು ಎಂದರು. ಮುಖಂಡರಾದ ಅಬ್ದುಲ ಹಮೀದ ಮುಶ್ರೀಫ್, ಪರವೇಜ ಚಟ್ಟರಕಿ, ಶಬ್ಬೀರ ಜಾಗೀರದಾರ, ಅಬ್ದುಲಖಾದರ ಖಾದಿಮ್, ಚಾಂದಸಾಬ ಗಡಗಲಾವ, ಜಮೀರಅಹ್ಮದ ಬಕ್ಷಿ, ಆರತಿ ಶಹಾಪುರ, ವಸಂತ ಹೊನಮೊಡೆ, ಧನರಾಜ ಎ, ಶರಣಪ್ಪ ಯಕ್ಕುಂಡಿ, ಸುಂದರಪಾಲ ರಾಠೋಡ, ದಾವಲಸಾಬ ಬಾಗವಾನ, ಮಕ್ಸೂದ ಸುತಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts