More

    ‘ದುನಿಯಾ’ ವಿಜಯ್​ ನಿರ್ದೇಶನದ ಚಿತ್ರಕ್ಕೆ ಡಾ. ರಾಜ್ ಕುಟುಂಬದ ಕುಡಿ ನಾಯಕ …

    ಬೆಂಗಳೂರು: ‘ಸಲಗ’ ಚಿತ್ರದ ನಂತರ ‘ದುನಿಯಾ’ ವಿಜಯ್​, ಹೊಸಬರನ್ನಿಟ್ಟುಕೊಂಡು ಒಂದು ಹೊಸ ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಚಿತ್ರದ ನಾಯಕ-ನಾಯಕಿ ಯಾರು ಎಂದು ವಿಜಯ್​ ಬಿಟ್ಟುಕೊಟ್ಟಿರಲಿಲ್ಲ. ವಿಜಯದಶಮಿಯ ದಿನಂದು ಚಿತ್ರದ ನಾಯಕ ಯಾರು ಎಂಬುದನ್ನು ಘೋಷಿಸುವುದಾಗಿ ಅವರು ಹೇಳಿಕೊಂಡಿದ್ದರು. ಅದರಂತೆ, ಇಂದು ನಾಯಕನ ಘೋಷಣೆಯಾಗಿದೆ.

    ಇದನ್ನೂ ಓದಿ: ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಸೀರಿಯಲ್​ ನಟಿ..!

    ಅಂದಹಾಗೆ, ತಮ್ಮ ಹೊಸ ಚಿತ್ರದ ಮೂಲಕ ಡಾ. ರಾಜಕುಮಾರ್​ ಕುಟುಂಬದ ಕುಡಿ ಲಕ್ಕಿ ಗೋಪಾಲ್​ ಅವರನ್ನು ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ ವಿಜಯ್​. ಈ ಹಿಂದೆ, ಶಿವರಾಜಕುಮಾರ್​ ಅಭಿನಯದ ‘ಎಸ್​ಆರ್​ಕೆ’ ಎಂಬ ಚಿತ್ರವನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದರು ಲಕ್ಕಿ. ಚಿತ್ರದ ಕೆಲಸಗಳು ಪ್ರಾರಂಭವಾದರೂ, ಚಿತ್ರೀಕರಣ ಇನ್ನಷ್ಟೇ ಪ್ರಾರಂಭವಾಗಬೇಕಿದೆ.

    ಈ ಮಧ್ಯೆ, ಅವರು ವಿಜಯ್​ ಅಭಿನಯದ ಹೊಸ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ವಿಜಯ್​ ಮತ್ತು ಲಕ್ಕಿ ಇಬ್ಬರೂ ಶಿವರಾಜಕುಮಾರ್​ ಅವರ ಹಾರೈಕೆ ಮತ್ತು ಆಶೀರ್ವಾದಗಳನ್ನು ಪಡೆದು ಬಂದಿದ್ದಾರೆ. ಇನ್ನು ನಾಯಕಿ ಮತ್ತು ನಿರ್ಮಾಪಕರ್ಯಾರು ಎಂಬುದನ್ನು ವಿಜಯ್​ ಸದ್ಯದಲ್ಲೇ ಹೇಳಲಿದ್ದಾರಂತೆ.

    ಈ ಕುರಿತು ಮಾತನಾಡಿರುವ ವಿಜಯ್​, ‘ನಟನಾಗಬೇಕು ಎಂಬ ಹಂಬಲದಿಂದ ಅಭಿನಯ ಕಲಿತಿದ್ದ ನನಗೆ ಚಿತ್ರರಂಗ ಪ್ರವೇಶಿಸುವುದು ಕೊಂಚ ಕಷ್ಟದ ಕೆಲಸವಾಗಿತ್ತು. ಆ ಕಷ್ಟವನ್ನು ಮತ್ತೊಂದು ಕಷ್ಟದ ಮೂಲಕವೇ ಜಯಿಸಬೇಕು ಎಂದು ತೀರ್ಮಾನಿಸಿ ಸ್ಟಂಟ್ ಕಲಿತು ಸಾಹಸ ಕಲಾವಿದನಾಗಿ ಚಿತ್ರರಂಗಕ್ಕೆ ಬಂದೆ ನಂತರದ ದಿನಗಳಲ್ಲಿ ಸಾಹಸದ ಜತೆಯಲ್ಲಿ ಒಳ್ಳೊಳ್ಳೆ ಪಾತ್ರಗಳಲ್ಲಿಯೂ ನಟಿಸಲು ಆರಂಭಿಸಿದೆ. ಒಂದಷ್ಟು ದಿನಗಳ ನಂತರ ‘ದುನಿಯಾ’ ಸಿನಿಮಾದ ಮೂಲಕ ನಾಯಕನಾದೆ. ಕನ್ನಡಿಗರು ಅಭಿಮಾನದಿಂದ ತಮ್ಮೆರೆಡು ಕೈಗಳಿಂದ ನನ್ನನ್ನು ಬಾಚಿ ತಬ್ಬಿಕೊಂಡು ಸಿನಿಮಾ ಗೆಲ್ಲಿಸಿದರು. ಜತೆಗೆ ಈ ಹುಡುಗನಲ್ಲಿ ಪ್ರತಿಭೆ ಇದೆ ಎಂದು ಅವರ ಮನಸ್ಸಿನಲ್ಲಿ ನನಗೊಂದು ಸ್ಥಾನವನ್ನು ನೀಡಿದರು’ ಎನ್ನುತ್ತಾರೆ ವಿಜಯ್​.

    ಇದನ್ನೂ ಓದಿ: ಜೈಲಿನಲ್ಲೇ ದಸರಾ ಆಚರಿಸಬೇಕಷ್ಟೆ ರಾಗಿಣಿ, ಸಂಜನಾ!

    ಇದೆಲ್ಲವೂ ಒಂದು ಹಂತವಾದರೆ, ತಾವು ನಿರ್ದೇಶಕರಾದ ಬಗೆಯನ್ನು ವಿವರಿಸುವ ಅವರು, ‘ಆ ನಂತರ ‘ಸಲಗ’ ಚಿತ್ರವನ್ನು ನಿರ್ದೇಶನ ಮಾಡಲು ನಿರ್ಧಾರ ಮಾಡಿದೆ. ಕೆ ಪಿ ಶ್ರೀಕಾಂತ್, ನಾಗಿ ಮತ್ತು ನನ್ನ ತಂಡ ನೀಡಿದ ಸಾಥ್ ನಿಂದಾಗಿ ಸಲಗ ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಹೊಸ ಆಲೋಚನೆಗಳೊಂದಿಗೆ ಹೊಸ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದೇನೆ. ನಾಯಕನಾಗಿದ್ದವನು ನಿರ್ದೇಶಕನಾದೆ, ಈಗ ಹೊಸಬರೊಂದಿಗೆ ಹೊಸ ಪ್ರಯೋಗಕ್ಕೆ ಇಳಿಯುತ್ತಿದ್ದೇನೆ. ನನ್ನ ‌ಹೊಸ ಕಥೆಗೆ ಲಕ್ಕಿ ಎಂಬ ಹೊಸ ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸದ್ಯದಲ್ಲೇ ನಾಯಕಿ ಮತ್ತು ನಿರ್ಮಾಪಕರ್ಯಾರು ಎಂಬುದನ್ನು ಹೇಳುತ್ತೇವೆ. ನನ್ನ ಈ ಪ್ರಯತ್ನಕ್ಕೆ ಹಿರಿಯರು ನನ್ನ ಸೋದರ ಸಮಾನರಾದ ಶಿವಣ್ಣ, ಗೀತಾಕ್ಕ ಮನಃ ಪೂರ್ವಕವಾಗಿ ಹಾರೈಸಿದ್ದಾರೆ. ನಮ್ಮ ಇಡೀ ತಂಡಕ್ಕೆ ವಿಜಯ ಸಿಗಲಿ ಎಂದು ನೀವು ಹಾರೈಸಿ’ ಎಂದು ವಿಜಯ್​ ಅಭಿಮಾನಿಗಳಲ್ಲಿ ಪ್ರಾರ್ಥಿಸಿದ್ದಾರೆ.

    ಶರ್ವಾನಂದ್​ ಚಿತ್ರಕ್ಕೆ ಸಾಯಿಪಲ್ಲವಿ ಬದಲು ರಶ್ಮಿಕಾ ಆಯ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts