More

    ಹೋಗ್ರಯ್ಯ ಹೋಗಿ ನಿಮ್ಮ ಕೆಲಸ ಮಾಡಿ ಹೋಗಿ: ಟ್ರೋಲಿಗರಿಗೆ ವಿಜಯ್​ ಸೇತುಪತಿ ಖಡಕ್​ ಪ್ರತಿಕ್ರಿಯೆ

    ಚೆನ್ನೈ: ನಾನು ಯಾವುದೇ ಧರ್ಮಕ್ಕೆ ಸೇರಿದವನಲ್ಲ ಎಂದು ಕಾಲಿವುಡ್​ ಖ್ಯಾತ ನಟ ವಿಜಯ್​ ಸೇತುಪತಿ ಈಗಾಗಲೇ ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ. ಆದರೂ ಇತ್ತೀಚೆಗೆ ನಟ ಇಳಯದಳಪತಿ ವಿಜಯ್ ನಿವಾಸದ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯನ್ನು ಆಧಾರವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಯಿಂದ ಸಿಟ್ಟಾಗಿರುವ ಸೇತುಪತಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. ​

    ಐಟಿ ದಾಳಿಯಿಂದ ಅನೇಕ ಪಿತೂರಿಗಳು ಆಚೆ ಬಂದಿದೆ. ನಟ ವಿಜಯ್​ ಸೇತುಪತಿ ಈಗಾಗಲೇ ಕ್ರಿಶ್ಚಿಯನ್​ಗೆ ಮತಾಂತರವಾಗಿದ್ದಾರೆ ಎಂದೆಲ್ಲ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿದೆ. ಇದರಿಂದ ಆಕ್ರೋಶಗೊಂಡಿರುವ ಸೇತುಪತಿ, ತಮ್ಮ ವಿರುದ್ಧದ ಪೋಸ್ಟ್​ಗಳನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿ, “ಹೋಗ್ರಯ್ಯ ಹೋಗಿ ನಿಮ್ಮ ಕೆಲಸ ಮಾಡಿ ಹೋಗಿ” ಎಂದು ತಮಿಳು ಭಾಷೆಯಲ್ಲಿ ಟ್ರೋಲಿಗರಿಗೆ ಖಡಕ್​ ಪ್ರತಿಕ್ರಿಯೆ ನೀಡಿ, ಆರೋಪಗಳನ್ನು ಅಲ್ಲಗೆಳೆದಿದ್ದಾರೆ.

    ಇನ್ನು ಹರಿದಾಡಿರುವ ಸಂದೇಶದಲ್ಲಿರುವಂತೆ ಜೆಪ್ಪೈರ್​ ಮಗಳಾದ ರೆಜಿನಾ ತಮಿಳು ನಾಡಿನಲ್ಲಿ ಕ್ರಿಶ್ಚಿಯನ್​ ಮತಾಂತರ ಚಳವಳಿ ಮಾಡಲು ಬಯಸಿದ್ದಾರೆ. ಇದಕ್ಕೆ ನಟರಾದ ವಿಜಯ್​ ಸೇತುಪತಿ, ಆರ್ಯ ಮತ್ತು ಇತರೆ ನಟರು ಸಾಥ್​ ನೀಡಿದ್ದಾರೆ. ಅಲ್ಲದೆ, ಇವರೆಲ್ಲರೂ ಈಗಾಗಲೇ ಕ್ರಿಶ್ಚಿಯನ್​ಗೆ ಮತಾಂತರವಾಗಿದ್ದಾರೆ ಎಂಬುದನ್ನು ಸೂಚಿಸುತ್ತಿದೆ ಎಂದು ಬರೆಯಲಾಗಿದೆ.

    ರೆಜಿನಾ ಅವರು ವಿಜಯ್​ ಅಭಿನಯದ ಬಿಗಿಲ್​ ಸಿನಿಮಾಗೆ ಬಂಡವಾಳ ಹೂಡಿದ್ದು, ಅದನ್ನು ಎಜಿಎಸ್​ ಎಂಟರ್ಟೈನ್​ಮೆಂಟ್ ಹೆಸರಲ್ಲಿ ಮಾಡಿದ್ದಾರೆ.​ ಚಿತ್ರದಿಂದ ಬಂದ ಕಪ್ಪು ಹಣದ ಆದಾಯವನ್ನು ನಿರ್ಮಾಪಕರಾದ ಏಜಿಎಸ್​ ಮತ್ತು ಅಬು ಚೆಝೈನ್ ಅವರು ರೆಜಿನಾಗೆ ವರ್ಗಾಯಿಸಿದ್ದಾರೆ. ಈ ಪ್ರಕರಣದಲ್ಲಿ ಮತ್ತಷ್ಟು ನಿಗೂಢಗಳು ಹಾಗೂ ಸರ್ಪ್ರೈಸ್​ಗಳು ಮುಂದಿನ ದಿನಗಳಲಿ ಹೊರಬರಲಿದೆ ಎಂದಿದ್ದಾರೆ.

    ಸುಖಾಸುಮ್ಮನ್ನೇ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರಗಳು ಸದ್ಯ ಮಾಸ್ಟರ್​ ಚಿತ್ರದ ಶೂಟಿಂಗ್​ನಲ್ಲಿ ಬಿಜಿಯಾಗಿರುವ ವಿಜಯ್​ ಸೇತುಪತಿಯ ಕಿವಿಗೆ ಬಿದ್ದಿದೆ. ಇದಕ್ಕೇ ತನ್ನದೇ ಆದ ಶೈಲಿಯಲ್ಲಿ ಸೇತುಪತಿ ಉತ್ತರ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts