More

    ಯುವ ಮನಸ್ಸುಗಳಿಗೆ ವಿಜಯಾನಂದ ಸಿನಿಮಾ ಸ್ಫೂರ್ತಿ ನೀಡುವುದಂತೂ ಖಂಡಿತ: ನಟಿ ಆಶಿಕಾ ರಂಗನಾಥ್​

    ಬೆಂಗಳೂರು: ವಿಆರ್​​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾ ಇಂದಿನಿಂದ ಜಗತ್ತಿನಾದ್ಯಂತ ಬೆಳ್ಳಿತೆರೆಯ ಮೇಲೆ ರಾರಾಜಿಸಲಿದೆ. ಈ ಸಿನಿಮಾ ಯುವ ಮನಸ್ಸುಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದು, ಈಗಾಗಲೇ ಪ್ರೀಮಿಯರ್​ ಶೋನಲ್ಲಿ ಸಿನಿಮಾ ವೀಕ್ಷಿಸಿದ ಸೆಲೆಬ್ರಿಟಿಗಳು ವಿಜಯ ಸಂಕೇಶ್ವರ ಅವರ ಜೀವನ ಪಯಣವನ್ನು ಕಣ್ತುಂಬಿಕೊಂಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ ವೀಕ್ಷಿಸಿದ ಬಳಿಕ ದಿಗ್ವಿಜಯ ನ್ಯೂಸ್​ ಜೊತೆ ಮಾತನಾಡಿದ ನಟಿ ಆಶಿಕಾ ರಂಗನಾಥ್​, ನಿಜವಾಗಿಯೂ ವಿಜಯಾನಂದ ಒಂದು ಸ್ಫೂರ್ತಿದಾಯಕ ಕತೆಯಾಗಿದೆ. ಮೊದಲ ಬಾರಿಗೆ ಕನ್ನಡದಲ್ಲಿ ಒಂದು ಬಯೋಪಿಕ್​ ಸಿನಿಮಾ ಮಾಡಿದ್ದಾರೆ. ಇದು ನಮಗೆಲ್ಲ ಒಂದು ಹೆಮ್ಮೆಯ ಕ್ಷಣವಾಗಿದೆ. ಕನ್ನಡದಲ್ಲಿ ಒಳ್ಳೊಳ್ಳೆ ಸಿನಿಮಾಗಳು ಬರುತ್ತಿವೆ. ಆ ಪೈಕಿ ವಿಜಯಾನಂದ ಸಿನಿಮಾ ಕೂಡ ಒಂದು. ನಿಜಕ್ಕೂ ಇದು ಒಂದು ಒಳ್ಳೆಯ ಪ್ರಯತ್ನವಾಗಿದೆ ಎಂದರು.

    ಸಿನಿಮಾದಲ್ಲಿ ಮೈರೋಮಾಂಚನವಾಗುವ ಅನೇಕ ದೃಶ್ಯಗಳಿವೆ. ಜೀವನದಲ್ಲಿ ಏಳು-ಬೀಳುಗಳು ಸಹಜ. ಯಾವುದೇ ಪರಿಸ್ಥಿತಿಯಲ್ಲಿ ಪ್ರಯತ್ನ ಬಿಡಬಾರದು ಎಂಬ ಪಾಠವಿದೆ. ಇನ್ನೇನು ಜೀವನದಲ್ಲಿ ಸೋಲುತ್ತೇವೆ ಎಂಬ ಹಂತದಲ್ಲೂ ಇನ್ನೊಂದು ಅವಕಾಶಕ್ಕಾಗಿ ಹುಡುಕಾಡಿ ಮತ್ತೆ ಪುಟಿದೇಳಬೇಕು ಎಂಬ ಜೀವನದ ಪಾಠ ಈ ಸಿನಿಮಾದಲ್ಲಿದ್ದು, ಯುವ ಮನಸ್ಸುಗಳಿಗೆ ಈ ಸಿನಿಮಾ ಸ್ಫೂರ್ತಿ ನೀಡುವುದಂತೂ ಖಂಡಿತ ಎಂದು ಹೇಳಿದರು.

    ವಿಜಯ ಸಂಕೇಶ್ವರ ಅವರ ಸ್ಫೂರ್ತಿದಾಯಕ ಜೀವನವನ್ನು ಕಣ್ತುಂಬಿಕೊಳ್ಳಲು ಎಲ್ಲರಿಗು ಒಂದು ಅವಕಾಶ ಸಿಕ್ಕಿದೆ. ಇಂತಹ ಸಿನಿಮಾ ಮಾಡಿದ್ದಕ್ಕೆ ಇಡೀ ಚಿತ್ರತಂಡಕ್ಕೆ ಧನ್ಯವಾದಗಳು. ಎಲ್ಲರು ಬಂದು ಈ ಸಿನಿಮಾವನ್ನು ನೋಡಿ ಎಂದು ನಟಿ ಆಶಿಕಾ ರಂಗನಾಥ್​ ಕರೆ ನೀಡಿದರು. (ದಿಗ್ವಿಜಯ ನ್ಯೂಸ್​)

    ಇಂದಿನಿಂದ ವಿಜಯಾನಂದ ಹಬ್ಬ; ವಿಶ್ವಾದ್ಯಂತ 1300ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಬಿಡುಗಡೆ

    ‘ಸಿರಿ’ ಸಂಭ್ರಮದ ವಿಜಯಾನಂದ; ಶ್ರೀಮತಿ ಲಲಿತಾ ಸಂಕೇಶ್ವರ ಪಾತ್ರದಲ್ಲಿ ಸಿರಿ ಪ್ರಹ್ಲಾದ್

    ಎಲ್ಲೆಲ್ಲೂ ವೈರಲ್ ವಿಜಯಾನಂದ; ಪ್ಯಾನ್ ಇಂಡಿಯಾ ಪ್ರಚಾರ ಹೊಸತನಗಳ ಮಹಾಪೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts