More

    ವಿದ್ಯಾ‘ದೇಗುಲ’ ಸಮಾಜದ ಕಣ್ಣು

    ಹಂದಿಗೋಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ

    ಕುಮಟಾ: ಊರಿನ ಅಭಿವೃದ್ಧಿ ಮತ್ತು ಉತ್ತಮ ಸಂಸ್ಕಾರ ನೀಡುವಲ್ಲಿ ಶಾಲೆ ಮತ್ತು ದೇವಸ್ಥಾನ ಎರಡು ಕಣ್ಣುಗಳಿದ್ದಂತೆ. ಯಾವುದೇ ಮೂಲ ಸೌಕರ್ಯ ಇಲ್ಲದಿರುವ ಕಾಲಘಟ್ಟದಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಿ ಬದುಕು ಕಟ್ಟಿಕೊಂಡವರು ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.

    ಭಾನುವಾರ ತಾಲೂಕಿನ ಹಂದಿಗೋಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಮಗುವಿಗೆ ಅಗತ್ಯವಿರುವ ಶಿಕ್ಷಣ ನೀಡುವಲ್ಲಿ ಪಾಲಕರ ಜವಾಬ್ದಾರಿ ಅಡಗಿದೆ. ಶಾಲೆಯ ಸ್ಥಿತಿ- ಗತಿಯೇ ಊರಿನ ಅಭಿವೃದ್ಧಿಯ ದಿಕ್ಸೂಚಿ. ಹಂದಿಗೋಣ ಶಾಲೆ ಹಲವಾರು ಸಾಧಕರನ್ನು ಸೃಷ್ಟಿಸಿದೆ ಎಂದರು. ಶತಮಾನೋತ್ಸವ ಸಮಿತಿಯಿಂದ ನೀಡಿದ ಮನವಿಗೆ ಸ್ಪಂದಿಸಿ ಶಾಲಾ ಕಟ್ಟಡ ಮತ್ತು ಕಾಂಪೌಂಡ್ ವ್ಯವಸ್ಥೆಗೆ ಸಹಕರಿಸುವುದಾಗಿಸಚಿವರು ತಿಳಿಸಿದರು.

    ಮುಖ್ಯ ಅತಿಥಿಯಾಗಿ ಮಾತನಾಡಿದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ, ಶಿಕ್ಷಣ ಒಂದು ಪ್ರಾದೇಶಿಕ ವ್ಯವಸ್ಥೆಯಾಗಿರದೆ, ಇಡೀ ಜಗತ್ತಿನ ವ್ಯವಸ್ಥೆಗೆ ತೆರೆದುಕೊಂಡಿದೆ. ವಿಶ್ವದಲ್ಲೆಡೆ ಭಾರತೀಯರು ವಿಜೃಂಭಿಸುತ್ತಿದ್ದಾರೆ. ನೂರು ವರ್ಷಗಳಿಂದ ಸುಶಿಕ್ಷಿತ ಪ್ರಜೆಗಳನ್ನು ರೂಪಿಸಿದ ಕೀರ್ತಿ ಹಂದಿಗೋಣ ಶಾಲೆಗೆ ಸಲ್ಲುತ್ತದೆ ಎಂದರು.

    ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಶಿಕ್ಷಣವೆಂದರೆ ನಿಂತ ನೀರಲ್ಲ. ಹರಿಯುವ ನದಿಯಂತೆ ವಿಶಾಲವಾಗಿದ್ದು, ಎಲ್ಲರೂ ಶಿಕ್ಷಣ ಪಡೆಯುವುದರ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.

    ಶತಮಾನೋತ್ಸವದ ಸ್ಮರಣ ಸಂಚಿಕೆ ‘ಶತಮಾನ ಪ್ರಭಾ’ ಬಿಡುಗಡೆಗೊಳಿಸಿ, ಅಧ್ಯಕ್ಷತೆ ವಹಿಸಿ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇಲ್ಲಿ ಎಲ್ಲ ವರ್ಗದವರು ಸೇರಿ ಅನೋನ್ಯವಾಗಿ ಜೀವಿಸುವುದರ ಜತೆಗೆ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿಯೊಂದಿಗೆ ಶಾಲೆಗೆ ಸಹಕರಿಸುತ್ತಿರುವುದು ಮಾದರಿಯಾಗಿದೆ. ಶಿಕ್ಷಣ ಸಂಸ್ಥೆ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಸದಸ್ಯ ನಾಗರಾಜ ಹೆಗಡೆ, ಕೃಷಿ ವಿಜ್ಞಾನಿ ಗಣಪತಿ ಮುಕ್ರಿ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ವೆಂಕಟರಮಣ ಪಟಗಾರ ಮಾತನಾಡಿದರು.

    ವೇದಿಕೆಯಲ್ಲಿ ಕಲಭಾಗ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ನಾಯ್ಕ, ಗ್ರಾ.ಪಂ. ಸದಸ್ಯ ಸುರೇಶ ಪಟಗಾರ, ನಾಗರಾಜ ಹೆಗಡೆ, ಪಿಡಿಒ ಡಿ. ಪ್ರಜ್ಞಾ, ಬಿಇಒ ರಾಜೇಂದ್ರ ಭಟ್ಟ, ನಿವೃತ್ತ ಸಿಪಿಐ ಎನ್.ಆರ್. ಮುಕ್ರಿ, ನಿವೃತ್ತ ಶಿಕ್ಷಕ ಎಂ.ಆರ್. ಉಪಾಧ್ಯಾಯ, ಭಾರತಿ ಪಟಗಾರ, ಎಸ್​ಡಿಎಂಸಿ ಅಧ್ಯಕ್ಷ ಗಣಪತಿ ಪಟಗಾರ, ಉಪಾಧ್ಯಕ್ಷೆ ಶಾರದಾ ಮುಕ್ರಿ, ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ವೆಂಕಟ್ರಮಣ ಪಟಗಾರ, ಚಂದ್ರಕಾಂತ ಮುಕ್ರಿ ಇದ್ದರು.

    ರಾಷ್ಟ್ರ ಪ್ರಶಸ್ತಿ ಪುರಸ್ಕೃ ಶಿಕ್ಷಕ ಎನ್.ಪಿ. ಭಾಗ್ವತ, ಕೃಷಿ ವಿಜ್ಞಾನಿ ಗಣಪತಿ ಮುಕ್ರಿ, ಇಸ್ರೋ ವಿಜ್ಞಾನಿ ಶಾಂತಲಾ ಹೆಗಡೆ, ಕೃಷಿ ವಿಜ್ಞಾನಿ ವಿವೇಕ ಭಟ್, ನಿವೃತ್ತ ಸಿಪಿಐ ಎನ್.ಆರ್. ಮುಕ್ರಿ, ಸಮಾಜ ಸೇವಕ ತಿಮ್ಮು ಮುಕ್ರಿ ಅವರನ್ನು ಸನ್ಮಾನಿಸಲಾಯಿತು. ಶಾಲೆಯಲ್ಲಿ ಹಿಂದೆ ಕೆಲಸ ಮಾಡಿದ ಶಿಕ್ಷಕರನ್ನು ಸನ್ಮಾನಿಸಲಾಯಿತು.

    ಮುಖ್ಯಾಧ್ಯಾಪಕಿ ಸವಿತಾ ನಾಯ್ಕ ಸ್ವಾಗತಿಸಿದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣಪತಿ ಭಾಗವತ ಪ್ರಾಸ್ತಾವಿಕವಾಗಿ ಮಾತನಾಡಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಭಟ್ ವಂದಿಸಿದರು. ಗಣೇಶ ಜೋಶಿ ಮತ್ತು ವಿಷ್ಣು ಪಟಗಾರ ನಿರೂಪಿಸಿದರು.

    ಬಳಿಕ ಶಿಕ್ಷಕರು ಹಾಗೂ ಪೂರ್ವ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ನಾರಾಯಣ ಭಾಗ್ವತ ಸಂಯೋಜಿಸಿ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃಕ ಕಾರ್ಯಕ್ರಮ ಹಾಗೂ ಪೂರ್ವ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts