ಕಾನ್ಪುರ: ಕಂಟಪೂರ್ತಿ ಕುಡಿದು ಬೆಂಚ್ ಮೇಲೆ ಮಲಗಿದ್ದ ಯುವಕನೋರ್ವ ತನ್ನ ತಲೆ ಬೆಂಚಿನ ಸಂದಿಯ ನಡುವೆ ಸಿಲುಕಿಕೊಂಡಿದ್ದ ಘಟನೆ ಕಾನ್ಪುರದ ರಾಮಲೀಲಾ ಪಾರ್ಕ್ನಲ್ಲಿ ನಡೆದಿದೆ.
ಇದನ್ನೂ ಓದಿ: ದೆಹಲಿ ಲಿಕ್ಕರ್ ಹಗರಣ: ಬಿಆರ್ಎಸ್ ನಾಯಕಿ ಕೆ.ಕವಿತಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಸ್ತರಣೆ
ರಾಮ್ಲೀಲಾ ಪಾರ್ಕ್ನಲ್ಲಿ ಭಾನುವಾರ (ಏಪ್ರಿಲ್ 7) ರಂದು ರಾತ್ರಿ ಏಳು ಗಂಟೆ ಸಮಯದಲ್ಲಿ ಕುಡಿತದ ಮತ್ತಿನಲ್ಲಿ ಬೆಂಚಿನ ಅಂತರದ ನಡುವೆ ಕುಡಿದ ಮತ್ತಿನಲ್ಲಿ ಮಲಗಿದ್ದ ವ್ಯಕ್ತಿ ಎಚ್ಚರಗೊಳ್ಳುವ ಹೊತ್ತಿಗೆ ಬೆಂಚಿನ ನಡುವೆ ತಲೆ ಸಿಲುಕಿ ಕೊಂಡಿರುವುದು ನೆನಪಾಗಿದೆ.
"सुरक्षा आपकी, संकल्प हमारा"…
थाना स्वरूपनगर अन्तर्गत रामलीला पार्क में एक व्यक्ति की गर्दन पार्क में लगाई गई बेंच में बुरी तरीके से फंस जाने से जान जोखिम की सूचना रात्रि करीब 01:00 बजे मिली। सूचना पर तत्काल चौकी प्रभारी बेनाझाबर उप निरीक्षक श्री कविन्द्र खटाना , प्रशिक्षु उप… pic.twitter.com/fDHMzChgaw
— POLICE COMMISSIONERATE KANPUR NAGAR (@kanpurnagarpol) April 8, 2024
ಕಾನ್ಪುರ ಪೊಲೀಸರ ಪ್ರಕಾರ, ಆ ಪಾರ್ಕ್ನಲ್ಲಿರುವ ಬೆಂಚಿಗೆ ತಲೆ ಸಿಕ್ಕಿಹಾಕಿಕೊಂಡಿರುವುದರಿಂದ ಕಿರುಚಾಟ ಆರಂಭಿಸಿದ್ದಾನೆ. ಮಧ್ಯರಾತ್ರಿಯಲ್ಲಿ ತನ್ನ ರಕ್ಷಣೆಗೆ ಬಂದ ಇಬ್ಬರು ಗಸ್ತು ಪೊಲೀಸರು ಬೆಂಚಿನ ನಡುವಿನ ಸಂದಿಯಲ್ಲಿ ಸಿಲುಕಿರುವುದು ತಿಳಿದುಬಂದಿದೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವ್ಯಕ್ತಿಯನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ.
ಸಮಯಕ್ಕೆ ಬಂದ ಪೊಲೀಸರ ನೆರವಿನಿಂದ ವ್ಯಕ್ತಿ ಗಂಭೀರ ಸಮಸ್ಯೆಯಿಂದ ಪಾರಾಗಿದ್ದಾನೆ. ಪೊಲೀಸರು ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಆತನಿಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ನಟಿ ಸಮಂತಾಗೆ 30, 40 ಅದೆಷ್ಟೇ ವಯಸ್ಸಾದ್ರೂ ಆಕೆ…. ಶಾಕಿಂಗ್ ಹೇಳಿಕೆ ನೀಡಿದ ಸ್ಟಾರ್ ಡೈರೆಕ್ಟರ್!