More

    ವಿದ್ಯಾರ್ಥಿಗೆ ಚಪ್ಪಲಿಯಿಂದ ಥಳಿಸಿ, ಬಾಯಿಗೆ ಮೂತ್ರ ಹೊಯ್ದರು! ಈ ಅಮಾನುಷ ಘಟನೆ ನಡೆದಿದ್ದಾದರೂ ಎಲ್ಲಿ? ವಿವರ ಇಲ್ಲಿದೆ..

    ಲಖನೌ: ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿದ ಹೆಡ್ ಕಾನ್‌ಸ್ಟೆಬಲ್ ಮತ್ತು ಇತರ 12 ಮಂದಿ ಹೆದರಿಸಲು ಆತನ ಮೇಲೆ ಪಿಸ್ತೂಲ್​ನಿಂದ ಗುಂಡು ಹಾರಿಸಿದ್ದು, ಚಪ್ಪಲಿಯಿಂದ ಥಳಿಸಿ ಬಲವಂತವಾಗಿ ಬಾಯಿಗೆ ಮೂತ್ರಹೊಯ್ದು ಕುಡಿಸಿದ್ದಾರೆ. ಕಾನ್ಪುರದಲ್ಲಿ ನಡೆದ ಈ ಘಟನೆ ಸಂಚಲನ ಮೂಡಿಸಿದೆ.

    ಇದನ್ನೂ ಓದಿ: ವಿಜಯಪುರದಲ್ಲಿ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು – ಬಸ್ ಬೆಂಕಿಗೆ ಆಹುತಿ

    ನಗರದ ಸಿವಿಲ್ ಲೈನ್ಸ್ ಪ್ರದೇಶದಿಂದ ಯಾರನ್ನೋ ಭೇಟಿಯಾಗಲು ಬಂದಿದ್ದ ಎಂಸಿಎ ವಿದ್ಯಾರ್ಥಿ ಆಯುಷ್ ದ್ವಿವೇದಿ (23) ಎಂಬಾತನನ್ನು ಅಪಹರಿಸಿ ಐದು ಕಿಲೋಮೀಟರ್ ದೂರದ ಕೂಪರ್‌ಗಂಜ್‌ನ ರೈಲ್ವೆ ಹಳಿಗಳ ಬಳಿಗೆ ಕರೆದೊಯ್ದು ಅಲ್ಲಿ ಹಲ್ಲೆ ನಡೆಸಿದ್ದಾರೆ ಎಂದುಪೊಲೀಸರು ತಿಳಿಸಿದ್ದಾರೆ.
    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎಂಸಿಎ ವಿದ್ಯಾರ್ಥಿಯ ವಿರುದ್ಧ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಹೆಡ್ ಕಾನ್‌ಸ್ಟೆಬಲ್ ಗೆ ಯುವಕನ ಮೇಲೆ ದ್ವೇಷಭಾವ ಹೊಂದಿದ್ದು, ಇದೇ ಕಾರಣಕ್ಕೆ ಹಲ್ಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

    ಘಟನೆ ನಡೆದ ಬಳಿಕ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳೀಯ ಗುಪ್ತಚರ ಘಟಕದಲ್ಲಿ ನಿಯೋಜಿತರಾಗಿರುವ ಧರ್ಮೇಂದ್ರ ಯಾದವ್ ಎಂಬ ಹೆಡ್ ಕಾನ್‌ಸ್ಟೆಬಲ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ನೀಲಬ್ಜಾ ಚೌಧರಿ ತಿಳಿಸಿದ್ದಾರೆ.

    ರಾಹುಲ್ ಗಾಂಧಿಯ ‘ಭಾರತ್ ನ್ಯಾಯ್ ಯಾತ್ರೆ’ ಆರಂಭಕ್ಕೆ ಮುನ್ನವೇ ವಿಘ್ನ: ಅನುಮತಿ ನಿರಾಕರಿಸಿದ ಮಣಿಪುರ ಸರ್ಕಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts