ಒಳಮೀಸಲು ವಿರೋಧಿಸಿ ಮತದಾನ ಬಹಿಷ್ಕಾರ

blank

ಹನುಮಸಾಗರ: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಸಮೀಪದ ವೆಂಕಟಾಪುರ ತಾಂಡಾ ಜನರು ವಿಧಾನಸಭಾ ಚುನಾವಣೆ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.


ತಾಂಡಾದ ದುರ್ಗಾದೇವಿ ದೇವಸ್ಥಾನದ ಬಳಿ ಅಳವಡಿಸಿದ ಬ್ಯಾನರ್‌ನಲ್ಲಿ ‘ಹಮಾರೋ ತಾಂಡೋ ಹಮಾರಾ ರಾಜ್’ ವಿಧಾನಸಭಾ ಚುನಾವಣೆ ಮತದಾನ ಬಹಿಷ್ಕಾರ ಎಂದು ಬರೆಸಿದ್ದಾರೆ. ಒಳ ಮೀಸಲಾತಿಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ತಾಂಡಾಕ್ಕೆ ರಾಜಕೀಯ ಮುಖಂಡರ ಪ್ರವೇಶ ಮಾಡುವಂತಿಲ್ಲ. ಸಮುದಾಯದ ಜನರಿಗೆ ನ್ಯಾಯ ನೀಡಬೇಕು. ಯಾವುದೇ ಪಕ್ಷದ ಕಾರ್ಯಕರ್ತರು ಮತ ಕೇಳುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ತಾಂಡಾದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಎಲ್ಲರೂ ಪಕ್ಷಾತೀತವಾಗಿ ವಿರೋಧಿಸಲಾಗುವುದು. ಒಗ್ಗಟ್ಟಿನಿಂದ ಚುನಾವಣೆ ಮತದಾನ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ. ಮತದಾನ ಬಹಿಷ್ಕಾರ ಮಾಡುವಂತೆ ನಮ್ಮ ಗ್ರಾಮದ ಇತರ ಸಮುದಾಯದವರಿಗೆ ಮನವಿ ಮಾಡಿಕೊಳ್ಳಲಾಗುವುದು. ಅವರಿಂದ ಬೆಂಬಲ ಸಿಗುವ ವಿಶ್ವಾಸವಿದೆ ಎಂದರು.


ತಾಂಡಾ ನಿವಾಸಿಗಳಾದ ತುಳಚಪ್ಪ ಪೂಜಾರ, ಬಸವರಾಜ ರಾಠೋಡ, ತುಕಾರಾಮ್ ಕಮತರ, ರಾಮು ಪೂಜಾರ, ಶಿವಪ್ಪ ನಾಯ್ಕ, ರಾಕೂರ ನಾಯ್ಕ, ರಾಮಲಿಂಗಪ್ಪ ಪೂಜಾರ, ಮೋತಿಲಾಲ್ ಪೂಜಾರ, ಮುತ್ತಪ್ಪ ನಾಯ್ಕ, ವೆಂಕಟೇಶ ನಾಯ್ಕ, ಲಾಲಪ್ಪ ನಾಯ್ಕ, ದೇವಕವ್ವ ಕಮತರ, ಉದಯ ಕಮತರ, ಸೋಮಲೇವ್ವ ನಾಯ್ಕ, ದೇವಪ್ಪ ನಾಯ್ಕ ಇತರರಿದ್ದರು.


ತಾಲೂಕಿನ ಎಲ್ಲ ತಾಂಡಾಗಳಿಗೆ ಸೋಮವಾರ ಭೇಟಿ ನೀಡಲಾಗುವುದು. ಲಂಬಾಣಿ ಸಮುದಾಯದ ಮುಖಂಡರ ಜತೆ ಸಭೆ ನಡೆಸಿ, ಮತದಾನದಿಂದ ದೂರ ಉಳಿಯದಂತೆ ಮನವೊಲಿಸಲಾಗುವುದುಕೆ.ರಾಘವೇಂದ್ರರಾವ್, ತಹಸೀಲ್ದಾರ್, ಕುಷ್ಟಗಿ

Share This Article

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…

ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups

Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…