ಬಸವಕಲ್ಯಾಣ: ೪೪ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವದ ನಿಮಿತ್ತ ಅನುಭವ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆಯಲ್ಲಿ ಬೆಳಗಾವಿಯ ಲಾವಣ್ಯ ಮಂಜುನಾಥ ೭ನೇ ತರಗತಿ ವಿದ್ಯಾರ್ಥಿನಿ ೭೫೦ ವಚನಗಳನ್ನು ಹೇಳಿ ಪ್ರಥಮ ಸ್ಥಾನ ಪಡೆದಳು. ಗುಲ್ಬರ್ಗಾದ ಜಗದೀಶ ಮರಪಳ್ಳಿ ೬೯೮ ವಚನ ಹೇಳಿ ದ್ವಿತೀಯ ಸ್ಥಾನ ಪಡೆದ. ಇಳಕಲ್ನ ಮಂಜಪ್ಪ ಪಾಟೀಲ್ ೬೯೫ ವಚನ ಹೇಳಿ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ವಿಜೇತರರಿಗೆ ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಸನ್ಮಾನಿಸಿ ಆಶೀರ್ವದಿಸಿದರು. ಸ್ಪರ್ಧೆ ಸಂಯೋಜಕರಾಗಿ ಬಾಬು ಬೆಲ್ದಾಳ, ವಿಶ್ವನಾಥ್ ಮುಕ್ತಾ, ಬಂಡೆಪ್ಪ ಶರಣರು, ಮಲ್ಲಿಕಾರ್ಜುನ್ ಪಾಟಿಲ್, ಮಹದೇವ್ ಇಜಾರೆ, ನವೀನ್ ಕುಮಾರ್ ಉತ್ಕಾರ್, ಸವಿತಾ ಬೋರೆ ಇತರರಿದ್ದರು.