More

    ಯುಪಿ ಸರ್ಕಾರ ವಜಾಕ್ಕೆ ಆಗ್ರಹ

    ವಿಜಯಪುರ: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
    ಸಂಘಟನೆ ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ ಮಾತನಾಡಿ, ಯುವತಿಯ ಅತ್ಯಾಚಾರ ಮಾಡಿದ ಆರೋಪಿಗಳನ್ನು ಬಂಧಿಸಿ, ಅವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.
    ಸಮಿತಿ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡಿದರು. ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ, ಮುಖಂಡರಾದ ಶರಣು ಸಿಂಧೆ, ಅಶೋಕ ಚಲವಾದಿ, ರಮೇಶ ದರಣಾಕರ, ಪರಶುರಾಮ ದಿಂಡವಾರ, ಮಂಜುನಾಥ ಯಂಟಮಾನ, ರಮೇಶ ನಿಂಬಾಳಕರ, ಪ್ರಕಾಶ ಗುಡಿಮನಿ, ವಿಜಯ ಕಾಂಬಳೆ, ರಾಜು ತೊರವಿ, ವಿಜಯ ಕಾಂಬಳೆ, ಪುಂಡಲೀಕ ಮೇಲಿನಮನಿ, ಬಾಬು ಗುಡಮಿ, ಶಿವು ತಡವಲಗಾ ಮತ್ತಿತರರಿದ್ದರು.

    ಎಐಡಿಎಸ್‌ಒದಿಂದ ಮನವಿ

    ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ವತಿಯಿಂದ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಸಂಘಟಕರಾದ ಸೈಯದ್ ಮೌಜಮ್ ಕಾಜಿ, ಕಾವೇರಿ ರಜಪೂತ, ದುಂಡೇಶ್ ಬಿರಾದಾರ, ಸುರೇಖಾ ಕಡಪಟ್ಟಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts