More

    ಅಪ್ಪು ಅವರಂತೆ ಬದುಕಲು ಪ್ರಯತ್ನಿಸಬೇಕು: ಉಪೇಂದ್ರ

    ಹೊಸಪೇಟೆ: ಪುನೀತ್ ರಾಜ್‌ಕುಮಾರ ಅವರ ಜೀವನದ ಆದರ್ಶಗಳು ಎಲ್ಲರಿಗೂ ಮಾದರಿ. ಅಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರೆ, ಸಾಲದು ಅವರ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ರಿಯಲ್ ಸ್ಟಾರ್ ಉಪೇಂದ್ರ ಕರೆ ನೀಡಿದರು.
    ಯುಐ ಚಿತ್ರದ ಚಿತ್ರೀಕರಣಕ್ಕಾಗಿ ನಗರಕ್ಕೆ ಆಗಮಿಸಿರುವ ಅವರು, ಮಂಗಳವಾರ ಪುನೀತ್ ರಾಜ್‌ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
    ಬಳಿಕ ಮಾತನಾಡಿದ ಉಪೇಂದ್ರ, ಯಾರೇ ಕೈ ಬಿಟ್ರೂ, ಹೊಸಪೇಟೆ ಜನ ಕೈ ಬಿಡುವುದಿಲ್ಲ ಎಂಬ ಅಪ್ಪು ಅವರ ಮಾತನ್ನು ಇಲ್ಲಿನ ಜನ ಅಕ್ಷರಶಃ ನಡೆಸಿಕೊಟ್ಟಿದ್ದಾರೆ. ಅಪ್ಪು ಅವರ ಪುತ್ಥಳಿ ಸ್ಥಾಪಿಸುವ ಮೂಲಕ ತಮ್ಮ ಅಭಿಮಾನವನ್ನು ಎತ್ತಿಹಿಡಿದಿದ್ದಾರೆ ಎಂದು ಸ್ಮರಿಸಿದರು.
    ಜೀವನದಲ್ಲಿ ಅಪ್ಪು ಅವರಂತೆ ಬದುಕಬೇಕು. ಅವರ ಗುಣಗಳನ್ನು ಪ್ರತಿನಿತ್ಯ ಪಾಲಿಸುವ ಮೂಲಕ ಅಪ್ಪುಗೆ ಗೌರವ ಸೂಚಿಸಬೇಕು ಎಂದರು.
    ಚುನಾವಣೆಗಳಲ್ಲಿ ಹಣ, ಜಾತಿ, ಪಕ್ಷ ನೋಡಿ ಓಟ್ ಹಾಕಬೇಡಿ. ಅಭ್ಯರ್ಥಿಯ ಸಿದ್ಧಾಂತ, ನಡುವಳಿಕೆಯನ್ನು ಗಮನಿಸಿ ಮತ ನೀಡಿ. ಆಯ್ಕೆಯಾದವರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೇ, ಪ್ರಜಾಕೀಯ ಮಾಡಬೇಕು ಎಂದು ರಿಯಲ್ ಸ್ಟಾರ್ ಉಪೇಂದ್ರ ಅಭಿಪ್ರಾಯಪಟ್ಟರು.
    ಈ ಸಂದರ್ಭದಲ್ಲಿ ಯುಐ ಚಿತ್ರದ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಲಹರಿ ಫಿಲಂಸ್‌ನ ಮನೋಹರನ್, ಬಿಜೆಪಿ ಯುವ ನಾಯಕ ಸಿದ್ಧಾರ್ಥ ಸಿಂಗ್, ಜ್ಯೋಗಿ ತಾಯಪ್ಪ ಜೊತೆಗಿದ್ದರು.

    ಸೆಲ್ಫಿಗಾಗಿ ನೂಕುನುಗ್ಗಲು
    ನೆಚ್ಚಿನ ನಾಯಕ ನಟ ಉಪೇಂದ್ರ ಅವರನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಉಪೇಂದ್ರ ಅವರೊಂದಿಗೆ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದಿದ್ದರಿಂದ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾದರು.
    ಆದರೂ, ಅಪ್ಪು ಅಭಿಮಾನಿಗಳು ಪುನೀತ್‌ರಾಜ್‌ಕುಮಾರ್, ರಾಜ್‌ಕುಮಾರ್ ಫ್ಯಾಮಿಲಿ ಫೋಟೋಗಳನ್ನು ಉಡುಗೊರೆಯಾಗಿ ನೀಡಿ, ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts