ನವದೆಹಲಿ: ದೇಶದಲ್ಲಿ ಅನ್ಲಾಕ್-2 ನಡೆಯುತ್ತಿದ್ದು, ಈ ಹಂತದಲ್ಲಿ ಕೇಂದ್ರಸರ್ಕಾರ ಪ್ರವಾಸೋದ್ಯಮ ಇಲಾಖೆಯ ಉತ್ತೇಜನಕ್ಕೆ ಮುಂದಾಗಿದೆ.
ಕರೊನಾ ವೈರಸ್ ಕಾರಣದಿಂದ ದೇಶದ ಎಲ್ಲ ಧಾರ್ಮಿಕ, ಐತಿಹಾಸಿಕ ಪ್ರವಾಸಿ ಸ್ಥಳಗಳೂ ಬಂದ್ ಆಗಿದ್ದವು. ಈಗಾಗಲೇ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಅನ್ಲಾಕ್-1ನೇ ಹಂತದಲ್ಲಿ ಕೇಂದ್ರ ಅವಕಾಶ ನೀಡಿದ್ದು, ಇದೀಗ ಜು.6ರಿಂದ ದೇಶದ ಎಲ್ಲ ಐತಿಹಾಸಿಕ ಸ್ಮಾರಕ ತಾಣಗಳೂ ಸಹ ಪ್ರವಾಸಿಗರಿಗೆ ಮುಕ್ತವಾಗಲಿವೆ.
ಜು.6ರಿಂದ ದೇಶದ ಎಲ್ಲ ಕಡೆಗಳಲ್ಲೂ ಇಷ್ಟು ದಿನ ಬಂದ್ ಆಗಿದ್ದ ಐತಿಹಾಸಿಕ ಸ್ಮಾರಕ ತಾಣಗಳು ಮತ್ತೆ ತೆರೆಯಲಿವೆ. ಕರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸಂಸ್ಕೃತಿ ಇಲಾಖೆ ಮಂತ್ರಿ ಪ್ರಲ್ಹಾದ್ ಸಿಂಗ್ ಪಟೇಲ್ ತಿಳಿಸಿದ್ದಾರೆ. ಇದನ್ನೂ ಓದಿ:ನಾಯಿ ಮರಿಯನ್ನು ಹೊತ್ತೊಯ್ಯುತ್ತಿದ್ದ ಚಿರತೆ ಮೇಲೆ ಬೀದಿ ನಾಯಿಗಳ ದಾಳಿ; ಮರಿ ಬಿಟ್ಟು ಓಡಿದ ಚಿರತೆ
ಆಯಾ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿರುವ ಪ್ರವಾಸಿ ತಾಣಗಳನ್ನು ಮತ್ತೆ ತೆರೆಯುವದಕ್ಕೆ ಸಂಬಂಧಪಟ್ಟಂತೆ ಸೂಕ್ತ ನಿರ್ಧಾರ, ಕ್ರಮ ಕೈಗೊಳ್ಳಲಿವೆ ಎಂದೂ ಅವರು ಹೇಳಿದ್ದಾರೆ.
ಕರೊನಾದಿಂದಾಗಿ ತಾಜ್ಮಹಲ್, ಕೆಂಪು ಕೋಟೆ ಸೇರಿ ಅನೇಕ ಪ್ರವಾಸಿ ತಾಣಗಳು ಗೇಟ್ ಬಂದ್ ಮಾಡಿದ್ದವು. ಪ್ರವಾಸಿಗರಿಲ್ಲದೆ ಭಣಗುಡುತ್ತಿದ್ದ ಈ ಪ್ರದೇಶಗಳಿಗೆ ಇನ್ನು ಮುಂದೆ ಜನರು ಆಗಮಿಸಬಹುದು. ಆದರೆ ಆಯಾ ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಕರೊನಾ ನಿಯಂತ್ರಣದ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಹಾಗೇ ಜು.4ರಿಂದ ದೆಹಲಿಯ ಜಾಮಾ ಮಸೀದಿ ಕೂಡ ತೆರೆಯಲಿದೆ. (ಏಜೆನ್ಸೀಸ್)
ಸದಾ ಕುಡಿದು ಬಂದು ಹಿಂಸಿಸುತ್ತಿದ್ದ ಪತಿಗೆ ಲಟ್ಟಣಿಗೆಯಲ್ಲೇ ಹೊಡೆದು ಕೊಂದ ಪತ್ನಿ