More

    ಮತ್ತೆ ಬರಲಿದ್ದಾನೆ ‘ಕೊಡೆಮುರುಗ’; ಮಾ.10ಕ್ಕೆ ಮರುಬಿಡುಗಡೆ

    ಬೆಂಗಳೂರು: ಒಂದೂವರೆ ವರ್ಷಗಳ ಹಿಂದೆ ‘ಕೊಡೆಮುರುಗ’ ಎಂಬ ಹಾಸ್ಯಪ್ರಧಾನ ಚಿತ್ರ ಬಿಡುಗಡೆಯಾಗಿದ್ದು ನೆನಪಿರಬಹುದು. ಸುಬ್ರಹ್ಮಣ್ಯ ಪ್ರಸಾದ್​ ನಿರ್ದೇಶನದ ಈ ಚಿತ್ರಕ್ಕೆ ನೋಡುಗರಿಂದ ಮೆಚ್ಚುಗೆ ವ್ಯಕ್ತವಾಯಿತಾದರೂ, ಕೊರಾನಾ ಭಯ ಇದ್ದಿದ್ದರಿಂದ ಹೆಚ್ಚು ಜನ ಪ್ರೇಕ್ಷಕರು ಚಿತ್ರಮಂದಿರದತ್ತ ಸುಳಿದಿರಲಿಲ್ಲ. ಮುಂದೊಂದು ದಿನ ಪರಿಸ್ಥಿತಿ ಸರಿ ಹೋದ ಮೇಲೆ, ಇನ್ನೊಮ್ಮೆ ಚಿತ್ರ ಮಾಡುವುದಾಗಿ ನಿರ್ದೇಶಕರು ಹೇಳಿದ್ದರು. ಅದಕ್ಕೆ ಸರಿಯಾಗಿ, ‘ಕೊಡೆಮುರುಗ’ ಮತ್ತೊಮ್ಮೆ ಬಿಡುಗಡೆಯಾಗುತ್ತಿದೆ. ಒಂದೂವರೆ ವರ್ಷಗಳ ನಂತರ ಮಾರ್ಚ್ 10ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

    ಇದನ್ನೂ ಓದಿ: ತಂದೆಯಿಂದಲೇ ಲೈಂಗಿಕ ದೌರ್ಜನ್ಯ: ಬಾಲ್ಯದ ಕಹಿ ಘಟನೆಯನ್ನು ಬಿಚ್ಚಿಟ್ಟ ಖುಷ್ಬೂ ಸುಂದರ್

    ಸುಬ್ರಹ್ಮಣ್ಯ ಪ್ರಸಾದ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ಚಿತ್ರ ಬಿಡುಗಡೆಯಾದ ಮೂರು ದಿನಕ್ಕೆ ನಾವು ಪ್ರದರ್ಶನ ನಿಲ್ಲಿಸಿದೆವು. ಒಂದು ಸಿನಿಮಾ ಬಿಡುಗಡೆ ಎಂಬುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಗೊತ್ತು. ಈಗ ಮತ್ತೆ ರಿಸ್ಕ್ ತೆಗೆದುಕೊಂಡು ರೀ-ರಿಲೀಸ್ ರಿಲೀಸ್ ಮಾಡುತ್ತಿದ್ದಾರೆ ನಿರ್ಮಾಪಕರು’ ಎನ್ನುತ್ತಾರೆ ಪ್ರಸಾದ್​. ನಿರ್ದೇಶನದ ಜತೆಗೆ ಈ ಚಿತ್ರದಲ್ಲಿ ನಿರ್ದೇಶಕನಾಗಿಯೂ ಕಾಣಿಸಿಕೊಂಡಿದ್ದಾರೆ.

    ಚಿತ್ರದ ನಾಯಕ ಮುನಿಕೃಷ್ಣ ಮಾತನಾಡಿ, ‘ಕೊರೋನಾ ಟೈಮ್‌ನಲ್ಲೂ ಒಂದೆರಡು ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಆಗಿತ್ತು ನಮ್ಮ ಸಿನಿಮಾ. ಈಗ ಮತ್ತೆ ಮಾರ್ಚ್ 10ರಂದು ಚಿತ್ರ ಬಿಡುಗಡೆಯಾಗುತ್ತಿದೆ’ ಎಂದರು.

    ನಿರ್ಮಾಪಕ ಕೆ. ರವಿಕುಮಾರ್ ಮಾತನಾಡಿ ‘ನಾವು ಈ ಮೊದಲು ಚಿತ್ರವನ್ನು ರಾಂಗ್ ಟೈಮ್‌ನಲ್ಲಿ ಬಿಡುಗಡೆ ಮಾಡಿದ್ದೆವು. ಜನರಿಂದ ಉತ್ತಮ ಪ್ರತಿಕ್ರಿಯೆ ಚಿತ್ರಕ್ಕಿದ್ದರೂ ಜನ ಥಿಯೇಟರ್‌ಗೆ ಬರುವ ಪರಿಸ್ಥಿತಿ ಇರಲಿಲ್ಲ. ಹಾಗಾಗಿ ನಾವು ಸಿನಿಮಾ ರಿಲೀಸ್ ಆದ ಮೂರು ದಿನಕ್ಕೆ ಪ್ರದರ್ಶನ ನಿಲ್ಲಿಸಿ, ಒಂದೊಳ್ಳೆ ಸಂದರ್ಭ ನೋಡಿಕೊಂಡು ಮರು ಬಿಡುಗಡೆ ಮಾಡುತ್ತೇವೆ ಎಂದಿದ್ದೇವು. ಆ ಪ್ರಕಾರ ಈಗ ಚಿತ್ರ ಹೊರತರುತ್ತಿದ್ದೇವೆ’ ಎಂದರು.

    ಇದನ್ನೂ ಓದಿ: ಶೂಟಿಂಗ್ ವೇಳೆ ನಟ ಅಮಿತಾಭ್ ಬಚ್ಚನ್​ಗೆ ಗಾಯ; ಆಸ್ಪತ್ರೆಗೆ ದಾಖಲು

    ‘ಕೊಡೆಮುರುಗ’ ಚಿತ್ರಕ್ಕೆ ರುದ್ರಮುನಿ ಬೆಳಗೆರೆ ಅವರ ಛಾಯಾಗ್ರಹಣ, ತ್ಯಾಗರಾಜ್ ಸಂಗೀತ, ಸಿ.ರವಿಚಂದ್ರನ್ ಸಂಕಲನವಿದ್ದು, ತಾರಾಬಳಗದಲ್ಲಿ ಸ್ವಾತಿ ಗುರುದತ್, ಅರವಿಂದ ರಾವ್, ಅಶೋಕ್ ಶರ್ಮ, ರಾಕ್‌ಲೈನ್ ಸುಧಾಕರ್, ಸ್ವಯಂವರ ಚಂದ್ರು, ಮೋಹನ್ ಜುನೇಜ, ಕುರಿ ಪ್ರತಾಪ್, ಗೋವಿಂದೇ ಗೌಡ ಮುಂತಾದವರು ಇದ್ದಾರೆ.

    ಕೊನೆಗೂ ನಿಜವಾಯ್ತು ಸುದ್ದಿ; ‘ಎನ್​ಟಿಆರ್​ 30’ ಚಿತ್ರದಲ್ಲಿ ಜಾಹ್ನವಿ ಕಪೂರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts