More

    ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ಗೆ ಎಸ್​ಒಜಿ ನೋಟಿಸ್​

    ಜೈಪುರ: ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನು ಉರುಳಿಸಲು ಹುನ್ನಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿದ್ದ ರಾಜಸ್ಥಾನ ಪೊಲಿಸ್​ ಪಡೆಯ ವಿಶೇಷ ಕಾರ್ಯಾಚರಣೆ ಪಡೆ (ಎಸ್​ಒಜಿ) ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಅವರಿಗೆ ವಿಚಾರಣೆಗೆ ಹಾಜರಾಗಿ, ಹೇಳಿಕೆ ದಾಖಲಿಸುವಂತೆ ನೋಟಿಸ್​ ನೀಡಿದೆ.

    ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ಮೂಲಕ ಗಜೇಂದ್ರ ಸಿಂಗ್​ ಶೇಖಾವತ್​ ಅವರಿಗೆ ನೋಟಿಸ್​ ತಲುಪಿಸಲಾಗಿದೆ ಎಂದು ಎಸ್​ಒಜಿಯ ಹೆಚ್ಚುವರಿ ಮಹಾಪ್ರಧಾನ ನಿರ್ದೇಶಕ ಅಶೋಕ್​ ರಾಥೋಡ್​ ತಿಳಿಸಿದ್ದಾರೆ.

    ಇದನ್ನೂ ಓದಿ: ರಾಮಮಂದಿರದ ಗರ್ಭಗುಡಿಯಲ್ಲಿ 40 ಕೆಜಿ ತೂಕದ ಬೆಳ್ಳಿಯ ಹಾಸುಗಲ್ಲು; ಆ.3ರಿಂದ ಧಾರ್ಮಿಕ ಕಾರ್ಯಕ್ರಮ

    ಗೆಹ್ಲೋಟ್​ ಸರ್ಕಾರವನ್ನು ಉರುಳಿಸಲು ಹುನ್ನಾರ ನಡೆಸಿ ದೂರವಾಣಿಯಲ್ಲಿ ಮಾತುಕತೆ ಮಾಡಲಾಗಿದೆ ಎಂದು ಹೇಳಲಾದ ಮೂರು ಧ್ವನಿತುಣುಕುಗಳು (ಆಡಿಯೋ ಕ್ಲಿಪ್​) ಸಿಕ್ಕಿವೆ. ಅವು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೆ ವೈರಲ್​ ಆಗಿವೆ. ಅವುಗಳ ಪೈಕಿ ಒಂದು ಧ್ವನಿತುಣುಕಿನಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಮತ್ತು ಕಾಂಗ್ರೆಸ್​ನ ಬಂಡಾಯ ಶಾಸಕರ ನಡುವೆ ನಡೆದಿದೆ ಎನ್ನಲಾದ ಮಾತುಕತೆ ದಾಖಲಾಗಿದೆ. ಆದ್ದರಿಂದ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್​ನ ಮುಖ್ಯಸಚೇತಕ ಮಹೇಶ್​ ಜೋಡಿ ನೀಡಿದ್ದ ದೂರನ್ನು ಆಧರಿಸಿ ಎಸ್​ಒಜಿ ಎರಡು ಪ್ರತ್ಯೇಕ ಎಫ್​ಐಆರ್​ಗಳನ್ನು ದಾಖಲಿಸಿಕೊಂಡಿತ್ತು.

    ಆ ಧ್ವನಿತುಣುಕುಗಳಲ್ಲಿ ಇರುವ ಕಾಂಗ್ರೆಸ್​ನ ಬಂಡಾಯ ಶಾಸಕರ ಧ್ವನಿಯನ್ನು ಭನ್ವರ್​ಲಾಲ್​ ಶರ್ಮ ಹಾಗೂ ಮಧ್ಯವರ್ತಿ ಸಂಜಯ್​ ಜೈನ್​ ಅವರದ್ದು ಎಂದು ಗುರುತಿಸಿ ಎಫ್​ಐಆರ್​ನಲ್ಲಿ ಹೆಸರಿಸಲಾಗಿತ್ತು. ಇದರ ಬೆನ್ನಲ್ಲೇ ಸಂಜಯ್​ ಜೈನ್​ ಅವರನ್ನು ಬಂಧಿಸಿದ್ದ ಎಸ್​ಒಜಿ, ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
    ಆದರೆ ಕಾಂಗ್ರೆಸ್​ನ ಈ ಎಲ್ಲ ಆರೋಪಗಳನ್ನು ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಮತ್ತು ಬಂಡಾಯ ಶಾಸಕ ಎನ್ನಲಾದ ಭನ್ವರ್​ಲಾಲ್​ ಶರ್ಮ ತಿರಸ್ಕರಿಸಿದ್ದರು.

    ಡ್ರೋನ್‌ ಪ್ರತಾಪ್‌ ಎಲ್ಲಿದ್ದಾನೆಂದು ಕೊನೆಗೂ ಕಂಡುಹಿಡಿದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts