ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗದೇ ಅದೇ ದುಃಖದಲ್ಲಿ ಸುಶಾಂತ್ ಅವರ ಅತ್ತಿಗೆ ಸಾವಿಗೀಡಾಗಿರುವ ಘಟನೆ ಬಿಹಾರದ ಪೂರ್ನಿಯಾದಲ್ಲಿ ನಡೆದಿದೆ.
ಸೋದರನ ಹೆಂಡತಿ ಸುಶಾ ದೇವಿ ಮೃತಪಟ್ಟಿದ್ದು, ಸುಶಾಂತ್ ಸಾವಿನ ಸುದ್ದಿ ತಿಳಿದಾಗಿನಿಂದ ಒಂದು ಅಗಳು ಅನ್ನವನ್ನು ಸಹ ತಿಂದಿರಲಿಲ್ಲ ಎಂದು ತಿಳಿದುಬಂದಿದೆ. ಸುಶಾಂತ್ ಅವರ ಅಂತ್ಯಕ್ರಿಯೆ ಮುಂಬೈನಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಸುಶಾ ದೇವಿ ಸಹ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಇದು ಆತ್ಮಹತ್ಯೆಯಲ್ಲ; ಕೊಲೆ ಎಂದ ಕಂಗನಾ
ಸುಶಾಂತ್ ಅವರು ಭಾನುವಾರ ಬೆಳಗ್ಗೆ ಮುಂಬೈನಲ್ಲಿನ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಮುಂಬೈ ಪೊಲೀಸರು ತನಿಖೆ ನಡೆಸಿದಾಗ ಸುಶಾಂತ್ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದ್ದು, ಅದಕ್ಕೆ ಸಂಬಂಧಿಸಿದ ಔಷಧಗಳ ಸಹ ದೊರಕಿವೆ. ಆದರೆ, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸುಶಾಂತ್ ಸಂಬಂಧಿಕರು ಆರೋಪಿಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಅಂದಹಾಗೆ ಸುಶಾಂತ್ ಅಂತ್ಯಕ್ರಿಯೆ ಸೋಮವಾರ ಮುಂಬೈನ ಪವನ್ ಹನ್ಸ್ ರುದ್ರಭೂಮಿಯಲ್ಲಿ ಕುಟುಂಬ ಹಾಗೂ ಕಿರುತೆರೆ ಹಾಗೂ ಹಿರಿತೆರೆಯ ಆಪ್ತರ ಸಮ್ಮುಖದಲ್ಲಿ ನೇರವೇರಿತು. (ಏಜೆನ್ಸೀಸ್)
ನೀವು ಒಬ್ಬಂಟಿಯಲ್ಲ ನಾವು ಜತೆಗಿದ್ದೇವೆ; ಮಾನಸಿಕ ಸ್ವಾಸ್ಥ್ಯದ ಬಗ್ಗೆ ಮಾತನಾಡಿದ ದೀಪಿಕಾ ಪಡುಕೋಣೆ