More

    ಇದು ಆತ್ಮಹತ್ಯೆಯಲ್ಲ; ಕೊಲೆ ಎಂದ ಕಂಗನಾ

    ಭಾನುವಾರ ನಿಧನರಾದ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಮುಗಿದಿದೆ. ಅದಕ್ಕೂ ಮುನ್ನ ಸುಶಾಂತ್​ ಅವರ ಪೋಸ್ಟ್​ ಮಾರ್ಟಂ ಮಾಡಿರುವ ವೈದ್ಯರು, ಇದು ಆತ್ಮಹತ್ಯೆ ಎಂದು ಧೃಡೀಕರಿಸಿದ್ದಾರೆ. ಉಸಿರುಗಟ್ಟಿದ್ದರಿಂದಲೇ ಸುಶಾಂತ್ ಅವರ ಸಾವು ಸಂಭವಿಸಿದೆ ಎಂದಿದ್ದಾರೆ.

    ಇದನ್ನೂ ಓದಿ: ಸುಶಾಂತ್ ರಣಜಿ ಟ್ರೋಫಿಯಲ್ಲಿ ಆಡ್ತಾರೆ ಎಂದಿದ್ದರು ಧೋನಿ!

    ಆದರೆ, ಕೆಲವರು ಇದು ಸಾವಲ್ಲ, ಕೊಲೆ ಎನ್ನುತ್ತಿದ್ದಾರೆ. ಚಿತ್ರರಂಗದವರು ಸುಶಾಂತ್​ ಅವರಿಗೆ ಸೂಕ್ತ ಗೌರವ ಕೊಡದೆ, ಅವರನ್ನು ಖಿನ್ನತೆಗೆ ತಳ್ಳಿ, ಆ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈಗ ಕಂಗನಾ ರಣೌತ್​ ಸಹ ಇದನ್ನೇ ಪುನರುಚ್ಚರಿಸಿದ್ದಾರೆ. ಸುಶಾಂತ್​ ಅವರದ್ದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಎಂದಿದ್ದಾರೆ.

    ಈ ಕುರಿತು ಇಂದು ಮಾತನಾಡಿರುವ ಅವರು, ಸೆಲೆಬ್ರಿಟಿಗಳಿಗೆ ಮಾನಸಿಕ ಖಿನ್ನತೆ ಇದ್ದರೆ, ಮಾಧ್ಯಮದವರು ಅವರ ಸಹಾಯಕ್ಕೆ ಧಾವಿಸಬೇಕು. ಅವರಿಗೆ ಸಹಾಯ ಮಾಡುವುದು ಬಿಟ್ಟು, ಅವರ ಕಷ್ಟವನ್ನು ಇನ್ನಷ್ಟು ಹೆಚ್ಚು ಮಾಡಬಾರದು ಎಂದು ಕಂಗನಾ ಹೇಳಿದ್ದಾರೆ.
    ಸುಶಾಂತ್​ಗೆ ಸಿಗಬೇಕಾಗಿದ್ದ ಸ್ಥಾನಮಾನ ಸಿಗಲಿಲ್ಲ ಎಂದು ಬೇಸರಿಸಿಕೊಂಡಿರುವ ಕಂಗನಾ, ಸುಶಾಂತ್​ಗೆ ಗಾಡ್​ಫಾದರ್​ ಇರಲಿಲ್ಲ. ಹಾಗಾಗಿ ಸಾಕಷ್ಟು ಪ್ರತಿಭೆ ಇದ್ದರೂ, ಒಳ್ಳೆಯ ಹಿಟ್​ಗಳನ್ನು ಕೊಟ್ಟರು, ಅವರಿಗೆ ಸಿಗಬೇಕಾಗಿದ್ದ ಸ್ಥಾನಮಾನ ಸಿಗಲಿಲ್ಲ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಸಿನಿಮಾ ಶೂಟಿಂಗ್‌ಗೆ ಮುಕ್ತ ಅವಕಾಶ ಕೊಟ್ಟ ರಾಜ್ಯ ಸರ್ಕಾರ

    ಇದು ಆತ್ಮಹತ್ಯೆಯಲ್ಲ, ಕೊಲೆ ಎಂದಿರುವ ಕಂಗನಾ, ಇದರಲ್ಲಿ ಸುಶಾಂತ್​ ಅವರ ತಪ್ಪೂ ಇದೆ ಎಂದಿದ್ದಾರೆ. ತಮ್ಮ ಮೃತ ತಾಯಿಯ ಮಾತುಗಳನ್ನು ಮರೆತು, ಯಾರೋ ಕೆಲವರು, ತನ್ನನ್ನು ಕೆಲಸಕ್ಕೆ ಬಾರದಿರುವವನು ಎಂದು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡು ಹೀಗೆ ಸತ್ತಿದ್ದು, ಸುಶಾಂತ್​ ಮಾಡಿದ ದೊಡ್ಡ ತಪ್ಪು ಎಂದು ಹೇಳಿದ್ದಾರೆ.

    ‘ಚಿರು 11ನೇ ದಿನದ ಪುಣ್ಯತಿಥಿಗೆ ಬನ್ನಿ, ಆದರೆ….’: ನಟ ಅರ್ಜುನ್​ ಸರ್ಜಾ ಮಾಡಿದ್ದಾರೊಂದು ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts