ಭಾನುವಾರ ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಮುಗಿದಿದೆ. ಅದಕ್ಕೂ ಮುನ್ನ ಸುಶಾಂತ್ ಅವರ ಪೋಸ್ಟ್ ಮಾರ್ಟಂ ಮಾಡಿರುವ ವೈದ್ಯರು, ಇದು ಆತ್ಮಹತ್ಯೆ ಎಂದು ಧೃಡೀಕರಿಸಿದ್ದಾರೆ. ಉಸಿರುಗಟ್ಟಿದ್ದರಿಂದಲೇ ಸುಶಾಂತ್ ಅವರ ಸಾವು ಸಂಭವಿಸಿದೆ ಎಂದಿದ್ದಾರೆ.
ಇದನ್ನೂ ಓದಿ: ಸುಶಾಂತ್ ರಣಜಿ ಟ್ರೋಫಿಯಲ್ಲಿ ಆಡ್ತಾರೆ ಎಂದಿದ್ದರು ಧೋನಿ!
ಆದರೆ, ಕೆಲವರು ಇದು ಸಾವಲ್ಲ, ಕೊಲೆ ಎನ್ನುತ್ತಿದ್ದಾರೆ. ಚಿತ್ರರಂಗದವರು ಸುಶಾಂತ್ ಅವರಿಗೆ ಸೂಕ್ತ ಗೌರವ ಕೊಡದೆ, ಅವರನ್ನು ಖಿನ್ನತೆಗೆ ತಳ್ಳಿ, ಆ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈಗ ಕಂಗನಾ ರಣೌತ್ ಸಹ ಇದನ್ನೇ ಪುನರುಚ್ಚರಿಸಿದ್ದಾರೆ. ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಎಂದಿದ್ದಾರೆ.
ಈ ಕುರಿತು ಇಂದು ಮಾತನಾಡಿರುವ ಅವರು, ಸೆಲೆಬ್ರಿಟಿಗಳಿಗೆ ಮಾನಸಿಕ ಖಿನ್ನತೆ ಇದ್ದರೆ, ಮಾಧ್ಯಮದವರು ಅವರ ಸಹಾಯಕ್ಕೆ ಧಾವಿಸಬೇಕು. ಅವರಿಗೆ ಸಹಾಯ ಮಾಡುವುದು ಬಿಟ್ಟು, ಅವರ ಕಷ್ಟವನ್ನು ಇನ್ನಷ್ಟು ಹೆಚ್ಚು ಮಾಡಬಾರದು ಎಂದು ಕಂಗನಾ ಹೇಳಿದ್ದಾರೆ.
ಸುಶಾಂತ್ಗೆ ಸಿಗಬೇಕಾಗಿದ್ದ ಸ್ಥಾನಮಾನ ಸಿಗಲಿಲ್ಲ ಎಂದು ಬೇಸರಿಸಿಕೊಂಡಿರುವ ಕಂಗನಾ, ಸುಶಾಂತ್ಗೆ ಗಾಡ್ಫಾದರ್ ಇರಲಿಲ್ಲ. ಹಾಗಾಗಿ ಸಾಕಷ್ಟು ಪ್ರತಿಭೆ ಇದ್ದರೂ, ಒಳ್ಳೆಯ ಹಿಟ್ಗಳನ್ನು ಕೊಟ್ಟರು, ಅವರಿಗೆ ಸಿಗಬೇಕಾಗಿದ್ದ ಸ್ಥಾನಮಾನ ಸಿಗಲಿಲ್ಲ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸಿನಿಮಾ ಶೂಟಿಂಗ್ಗೆ ಮುಕ್ತ ಅವಕಾಶ ಕೊಟ್ಟ ರಾಜ್ಯ ಸರ್ಕಾರ
ಇದು ಆತ್ಮಹತ್ಯೆಯಲ್ಲ, ಕೊಲೆ ಎಂದಿರುವ ಕಂಗನಾ, ಇದರಲ್ಲಿ ಸುಶಾಂತ್ ಅವರ ತಪ್ಪೂ ಇದೆ ಎಂದಿದ್ದಾರೆ. ತಮ್ಮ ಮೃತ ತಾಯಿಯ ಮಾತುಗಳನ್ನು ಮರೆತು, ಯಾರೋ ಕೆಲವರು, ತನ್ನನ್ನು ಕೆಲಸಕ್ಕೆ ಬಾರದಿರುವವನು ಎಂದು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡು ಹೀಗೆ ಸತ್ತಿದ್ದು, ಸುಶಾಂತ್ ಮಾಡಿದ ದೊಡ್ಡ ತಪ್ಪು ಎಂದು ಹೇಳಿದ್ದಾರೆ.
‘ಚಿರು 11ನೇ ದಿನದ ಪುಣ್ಯತಿಥಿಗೆ ಬನ್ನಿ, ಆದರೆ….’: ನಟ ಅರ್ಜುನ್ ಸರ್ಜಾ ಮಾಡಿದ್ದಾರೊಂದು ಮನವಿ