ಬಾಲಸೋರ್: ಮೀನುಗಾರಿಕೆಗೆ ಬಂಗಾಳ ಕೊಲ್ಲಿ ಬಾಗದ ಸಮುದ್ರಕ್ಕೆ ತೆರಳಿದ ಒಡಿಶಾದ ಬಾಲಸೋರ್ ಜಿಲ್ಲೆಯ ಮೀನುಗಾರರಿಗೆ ಭಾರಿ ಅಚ್ಚರಿಯೊಂದು ಕಾದಿತ್ತು. ಮೀನು ಹಿಡಿಯುವುದಕ್ಕಾಗಿ ಅವರು ಬೀಸಿದ ಬಲೆಯಲ್ಲಿ ಭಾರಿ ಅಚ್ಚರಿಯೊಂದು ಕಾದಿತ್ತು. ಅವರು ಸೋಮವಾರ ಆಳ ಸಮುದ್ರ ಮೀನುಗಾರಿಕೆ ನಡೆಸುವುದಕ್ಕಾಗಿ ತೆರಳಿದ್ದಾಗ ಈ ಅಚ್ಚರಿ ಎದುರಾಗಿದೆ.
ಬಲೆಗೆ ಏನೋ ಬಿದ್ದಂತಾದ ಅನುಭವವಾದ ಕಾರಣ ಕೂಡಲೇ ಬಲೆಯನ್ನು ಮೇಲೆಳೆಯಲು ಆರಂಭಿಸಿದರು. ಆಗ ಆರಂಭದಲ್ಲಿ ಕಾಣಿಸಿದ್ದು ಕೆಂಪು ಬಣ್ಣ ಕಾಣಿಸಿತು. ನಂತರ ಹಳದಿ ಮೂತಿ ಕಾಣಿಸಿತು. ತೂಕ 50 ಕಿಲೋ ಇರಬಹುದು ಎಂದು ಮೇಲೆತ್ತಿದ್ದವರಿಗೆ ನಿಜಕ್ಕೂ ಶಾಕ್ ! ಅದು ಬಾಂಬ್ ಇರಬಹುದೆಂದು ಆತಂಕಕ್ಕೆ ಈಡಾದ ಅವರು ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದರು.
ಇದನ್ನೂ ಓದಿ: ತಪ್ಪಿದ ಟ್ರಂಪ್ ವಿಮಾನ ಅಪಘಾತ
ಅಧಿಕೃತರು ಬಂದು ಪರಿಶೀಲಿಸಿದಾಗ, ಅದು ಮಾನವ ರಹಿತ ವಾಯುನೌಕೆ(ಯುಎವಿ) ಎಂಬುದನ್ನು ಖಚಿತ ಪಡಿಸಿದರು. ಮೀನುಗಾರರಿಂದ ಮಾಹಿತಿ ಪಡೆದ ಬಳಿಕ, ಅವರು ಮೀನುಗಾರಿಕೆ ನಡೆಸಿದ ಸ್ಥಾಳ ಇಂಟೆಗ್ರೇಟೆಡ್ ಟೆಸ್ಟ್ ರೇಂಜ್ಗೆ ಸಮೀಪವೇ ಇತ್ತು ಎಂಬುದನ್ನು ಖಾತರಿಪಡಿಸಿಕೊಂಡರು. ಭಾರತೀಯ ವಾಯುಪಡೆ ತರಬೇತಿ ವೇಳೆ ಸರ್ಫೇಸ್ ಟು ಏರ್ ಮತ್ತು ಏರ್ ಟು ಏರ್ ಕ್ಷಿಪಣಿ ಮತ್ತು ವೆಪನ್ ಸಿಸ್ಟಮ್ ಪರೀಕ್ಷೆ ನಡೆಸುವಾಗ ಇದನ್ನು ಬಳಸಿರುತ್ತದೆ. ಆಗ ಇದು ಸಮುದ್ರದಲ್ಲಿ ಬಿದ್ದಿರಬೇಕು ಎಂದು ಸೇನೆಯ ಮೂಲಗಳು ತಿಳಿಸಿವೆ. (ಏಜೆನ್ಸೀಸ್)