ಶ್ರೀನಗರ: ಕರೊನಾ ವೈರಸ್ನ ಭಯಕ್ಕೆ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಆಗಿವೆ. ಸದ್ಯದ ಮಟ್ಟಿಗೆ ಕರೊನಾ ವಿರುದ್ಧ ಹೋರಾಡುವುದೇ ಪ್ರಥಮ ಆದ್ಯತೆಯಾಗಿದೆ. ಆದರೆ ಉಗ್ರರಿಗೆ ಮಾತ್ರ ಈ ಆತಂಕ ತಟ್ಟಿದಂತಲ್ಲ. ಯಥಾ ಪ್ರಕಾರ ಭಾರತದ ಸೈನ್ಯಕ್ಕೆ ಉಪಟಳ ನೀಡುತ್ತಿದ್ದಾರೆ.
ಕುಲಗಾಂವ್ನಲ್ಲಿ ಇಂದು ಇಬ್ಬರು ಉಗ್ರರನ್ನು ಭಾರತೀಯ ಸೇನಾ ಯೋಧರು ಹೊಡೆದುರುಳಿಸಿದ್ದಾರೆ. ಮುಂಜಾನೆಯಿಂದಲೂ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಲೇ ಇತ್ತು.
ಕುಲಗಾಂವ್ನಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ನಂಬಲರ್ಹ ಮೂಲಗಳಿಂದ ಸಿಕ್ಕಿತ್ತು. ಅದರ ಅನ್ವಯ ಕಾರ್ಯಾಚಾರಣೆ ನಡೆಸಲಾಗಿತ್ತು. ಇಬ್ಬರು ಹತರಾಗಿದ್ದಾರೆ. ಇನ್ನೂ ಗುಂಡಿನಚಕಮಕಿ ನಡೆಯುತ್ತಿದೆ ಎಂದು ಜಮ್ಮುಕಾಶ್ಮೀದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.(ಏಜೆನ್ಸೀಸ್)