ಕೊಡಗು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಉಂಟಾಗಿ ಬೈಕ್ ಸವಾರರು ಇಬ್ಬರೂ ಮೃತಪಟ್ಟ ದುರ್ಘಟನೆ ಮಡಿಕೇರಿಯ ದೇವರಕೊಲ್ಲಿ ಬಳಿ ನಡೆದಿದೆ.
ರಾಜಸ್ಥಾನದ ಹರ್ನಬ್ (30) ಮತ್ತು ಪಶ್ಚಿಮಬಂಗಾಳದ ನವೀನ್ (29) ಮೃತರು. ಇವರಿಬ್ಬರೂ ಬೆಂಗಳೂರಿನ ಬ್ಯಾಂಕ್ ಆಫ್ ಬರೋಡಾದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಪ್ರವಾಸಕ್ಕೆಂದು ಮಂಗಳೂರಿನಿಂದ ಮಡಿಕೇರಿಗೆ ಆಗಮಿಸುತ್ತಿದ್ದರು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.