More

    ಅಮ್ಮನ ತಿಥಿ ಕಾರ್ಯ ಮುಗಿಸಿದ ಕೆಲವೇ ಗಂಟೆಗಳಲ್ಲಿ ಬಾರದ ಲೋಕಕ್ಕೆ ಹೋದ ಮಕ್ಕಳಿಬ್ಬರು!

    ಪಡುಬಿದ್ರಿ: ಕಳೆದ ವಾರ ಅಸುನೀಗಿದ್ದ ಹೆತ್ತಮ್ಮನ 11ನೇ ದಿನದ ತಿಥಿ ಕಾರ್ಯ ನೆರವೇರಿಸದ ಮಕ್ಕಳ ಪೈಕಿ ಇಬ್ಬರು ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಪಡುಬಿದ್ರಿ ದುರ್ಗಾದೇವಿ ಭಜನಾ ಮಂದಿರ ಬಳಿಯ ದಿ.ವೆಂಕಟರಾಯ ಆಚಾರ್ಯ ಅವರ ಪತ್ನಿ ವಾರಿಜಾ ಆಚಾರ್ಯ(80) ನಿಧನ ಹೊಂದಿದ್ದು, ಬುಧವಾರ 11ನೇ ದಿನದ ಕರ್ಮಗಳನ್ನು ಮೂವರು ಪುತ್ರರು ಸೇರಿ ನೆರವೇರಿಸಿದ್ದರು.

    ಇದನ್ನೂ ಓದಿರಿ ತೋಟದ ಮನೆಯಲ್ಲಿ ಸೆಕ್ಸ್ ಮಾಡುತ್ತಿರುವಾಗಲೇ ಮಹಿಳೆ ಮತ್ತು ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಿದ ಅಜ್ಜ-ಮೊಮ್ಮಗ!

    ವಾರಿಜಾ ಆಚಾರ್ಯ ಅವರ ತಿಥಿ ಕಾರ್ಯ ಮುಗಿದ ಬಳಿಕ ಹಿರಿಯ ಪುತ್ರ ಉದಯ ಆಚಾರ್ಯ(55) ಮಧ್ಯಾಹ್ನದ ಊಟ ಮುಗಿಸಿ ಸಂಜೆ 4 ಗಂಟೆ ಸುಮಾರಿಗೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆ ದಿನವೇ ತಡರಾತ್ರಿ ಎರಡೂವರೆ ಗಂಟೆ ಸುಮಾರಿಗೆ ಮತ್ತೋರ್ವ ಮಗ ವಿಶು ಆಚಾರ್ಯ (45) ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಉಡುಪಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿಶು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದರು. ಓರ್ವರದ್ದು ಗುರುವಾರ, ಮತ್ತೋರ್ವರ ಅಂತ್ಯಕ್ರಿಯೆ ಶುಕ್ರವಾರ ಪಡುಬಿದ್ರಿಯಲ್ಲಿ ನಡೆದಿದೆ.

    9 ಲಕ್ಷ ರೂ. ಬಿಲ್ ಕಟ್ಟಿದರಷ್ಟೇ ಮೃತದೇಹ ಕೊಡೋದು… ಶವಕ್ಕಾಗಿ 30 ತಾಸು ಆಸ್ಪತ್ರೆ ಬಾಗಿಲು ಕಾದ ಕುಟುಂಬಸ್ಥರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts