More

    ಫೇಸ್​ಬುಕ್​ ಗೆಳೆಯನನ್ನು ನಂಬಿ ಒಡವೆಗಳನ್ನು ಕೊಟ್ಟ ಯುವತಿಗೆ ಕೊನೆಗೆ ಸಿಕ್ಕಿದ್ದು ದುರಂತ ಸಾವು

    ಕಣ್ಣೂರು: ಕೆಲವೊಮ್ಮೆ ಜತೆಗಿದ್ದ ಫ್ರೆಂಡ್ಸ್​ಗಳನ್ನೇ ನಂಬಲು ಹಿಂದು-ಮುಂದು ನೋಡುವ ಕಾಲದಲ್ಲಿ ಫೇಸ್​ಬುಕ್​ ಮೂಲಕ ಪರಿಚಯವಾದವರನ್ನು ಯೋಚಿಸದೇ ನಂಬುವ ಮುನ್ನ ಒಮ್ಮೆ ಸ್ಟೋರಿ ಓದಿ.

    ಬುಡಕಟ್ಟು ಜನಾಂಗದ ಯುವತಿಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನೊಬ್ಬನನ್ನು ಕೇರಳದ ಕಣ್ಣೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕೆಲಕಮ್​ ಪೆರುವಾ ನಿವಾಸಿ ಬಿಬಿನ್​ ಎಂದು ಗುರುತಿಸಲಾಗಿದ್ದು, ಕೆಲಕಮ್​ ಠಾಣಾ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.

    ಇದನ್ನೂ ಓದಿ: 17,500 ಅಡಿ ಎತ್ತರ ಪ್ರದೇಶದಲ್ಲಿ ದಿಕ್ಕು ತೋಚದೆ ಪರದಾಟ: ಚೀನಾ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ಸೇನೆ!

    ಮಂಡಮ್​ಚೇರಿ ನಿವಾಸಿ ಶೋಭಾ ಮೃತದೇಹ ಆಗಸ್ಟ್​ 28 ರಂದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಶವಪರೀಕ್ಷೆ ನಡೆಸಿದ ವೈದ್ಯರು ನೇಣಿಗೆ ಹಾಕಿದ್ದರಿಂದ ಯುವತಿ ಸಾವಿಗೀಡಾಗಿದ್ದಾಳೆಂದು ವರದಿ ನೀಡಿದರು. ಇದೇ ಸುಳಿವಿಟ್ಟುಕೊಂಡ ಪೊಲೀಸರು ಇದರಲ್ಲಿ ಬಿಬಿನ್​ ಕೈವಾಡ ಇದೆ ಎಂದು ಅನುಮಾನಗೊಂಡು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.

    ಅಂದಹಾಗೆ ಬಿಬಿನ್​ ಫೇಸ್​ಬುಕ್​ ಮೂಲಕ ಶೋಭಾಳನ್ನು ಪರಿಚಯ ಮಾಡಿಕೊಂಡಿದ್ದಾನೆ. ಆತನನ್ನು ತುಂಬಾ ನಂಬಿದ್ದ ಶೋಭಾ ತನ್ನ ಒಡವೆಗಳನ್ನೆಲ್ಲಾ ಅಡಮಾನ ಇಡಲು ಆತನಿಗೆ ನೀಡಿದ್ದಾಳೆ. ಆದರೆ, ಒಡವೆಗಳನ್ನು ಮರಳಿ ನೀಡಿದ್ದಾಗ ಇಬ್ಬರ ನಡುವೆ ವಾಗ್ವಾದ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. (ಏಜೆನ್ಸೀಸ್​)

    ಮೇಘನಾ ರಾಜ್​ ಬಳಿ ಕ್ಷಮೆಯಾಚಿಸಿ ಇಂದ್ರಜಿತ್ ಹೇಳಿದ್ದು ಹೀಗೆ…​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts