ಕೋಲಾರ/ಬಾಗಲಕೋಟೆ: ನಷ್ಟದ ಕಾರಣಕ್ಕೆ ಸಂಬಳ ಕೊಡಲೂ ಹಣವಿಲ್ಲ ಎಂದು ಹೇಳಿದ್ದ ಸಾರಿಗೆ ಸಂಸ್ಥೆ ಇದೀಗ ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಕೆಲವರಿಗಷ್ಟೇ ವೇತನ ನೀಡಿದೆ. ಈ ನಡುವೆ ಹಬ್ಬ ಆಚರಿಸಲು ಹಣವಿಲ್ಲ ಎಂದು ಹೇಳಿ ಸಾರಿಗೆ ಸಂಸ್ಥೆ ನೌಕರರು ಭಿಕ್ಷಾಟನೆ ಮಾಡಿದ್ದೂ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಬಸ್ ನಿಲ್ದಾಣ ಬಳಿ ಸಾರಿಗೆ ಸಂಸ್ಥೆ ನೌಕರ ಪ್ರೇಮ್ಕುಮಾರ್ ಹಬ್ಬದ ದಿನವಾದ ಯುಗಾದಿಯಂದೇ ಭಿಕ್ಷೆ ಬೇಡಿದ್ದಾರೆ. ಸಂಸ್ಥೆ ಸಂಬಳ ನೀಡದ ಕಾರಣ ಹಬ್ಬ ಆಚರಣೆ ಮಾಡಲೂ ಹಣವಿಲ್ಲ. ಅದರಲ್ಲೂ ಬಸ್ ನಿಲ್ದಾಣದಲ್ಲಿ ಇವರೊಬ್ಬರೇ ಭಿಕ್ಷೆ ಬೇಡಿಲ್ಲ. ಭಿಕ್ಷಾಟನೆಗೆ ತನ್ನಿಬ್ಬರೂ ಮಕ್ಕಳನ್ನು ಕರೆದುಕೊಂಡು ಬಂದಿದ್ದರಿಂದ ಸಾರ್ವಜನಿಕರು ಅನುಕಂಪ ವ್ಯಕ್ತಪಡಿಸಿದರು.
ಇದನ್ನೂ ಓದಿ: ರುಂಡ-ಮುಂಡ ಬೇರೆ ಮಾಡಿ ಸೇಡು ತೀರಿಸಿಕೊಂಡರು; ಚಿಕ್ಕಪ್ಪನ ಮೇಲಿನ ದ್ವೇಷಕ್ಕೆ ಮಗನ ಕೊಲೆ
ಮತ್ತೊಂದೆಡೆ ಬಾಗಲಕೋಟೆಯಲ್ಲಿ ಚಾಲಕಿ-ಕಂ-ಕಂಡಕ್ಟರ್ರೊಬ್ಬರು ಮನೆಮನೆಗೂ ತೆರಳಿ ಭಿಕ್ಷಾಟನೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದಲ್ಲಿ ರಾಜೇಶ್ವರಿ ಬಂಗಾರಿ ಎಂಬ ಈ ಉದ್ಯೋಗಿ ತಟ್ಟೆ ಹಿಡಿದು ಬೇಡಿದ್ದು, ಜನರು ಐದು, ಹತ್ತು, ಇಪ್ಪತ್ತು ರೂಪಾಯಿ ಭಿಕ್ಷೆ ನೀಡಿದ್ದಾರೆ. ಬಿರು ಬಿಸಿಲಿನಲ್ಲಿ ಒಂಟಿಯಾಗಿ ತಿರುಗಾಡಿದ ಇವರು, ‘ಅಮ್ಮಾ.. ತಾಯಿ.. ನಮಗೆ ಸಂಬಳ ಕೊಟ್ಟಿಲ್ಲ.. ಉಣ್ಣಲೂ ಏನೂ ಇಲ್ಲ..’ ಎಂದು ಬೇಡಿದ್ದಾರೆ.
ನೀನ್ ಚೆನ್ನಾಗಿರು ದೇವ್ರು.. ನಿನ್ ಹೆಂಡ್ತಿ-ಮಕ್ಳು ಚೆನ್ನಾಗಿರ್ಲಿ; ಮುಷ್ಕರನಿರತ ಸಾರಿಗೆ ನೌಕರರಿಂದ ಗಾಂಧಿಗಿರಿ
ಬಸ್ ಚಕ್ರದಡಿ ಮಲಗಿ ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನ: ಠಾಣೆಯಲ್ಲಿ ಕಬ್ಬಿಣದ ಸರಳಿಗೆ ತಲೆ ಚಚ್ಚಿಕೊಂಡ ನೌಕರ!