ದೇವದುರ್ಗ: ಪಟ್ಟಣ ಠಾಣೆ ಪಿಐ ಕೆ.ಹೊಸಕೇರಪ್ಪ ಶಾಸಕ ಕೆ.ಶಿವನಗೌಡ ನಾಯಕ ಅಣತಿಯಂತೆ ಕೆಲಸ ಮಾಡುತ್ತಿದ್ದು, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಯಬೇಕಾದರೆ ಹೊಸಕೇರಪ್ಪ ಅವರನ್ನು ವರ್ಗಾವಣೆ ಮಾಡಬೇಕು ಎಂದು ಜೆಡಿಎಸ್ ಕಲ್ಯಾಣ ಕರ್ನಾಟಕ ಭಾಗದ ವೀಕ್ಷಕಿ ಜಿ.ಕರೆಮ್ಮ ನಾಯಕ ಒತ್ತಾಯಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಕೊತ್ತದೊಡ್ಡಿ ಗ್ರಾಮದಲ್ಲಿ ಕೇಂದ್ರ ಮೀಸಲು ಪಡೆ ಪಥ ಸಂಚಲನ ಸಂದರ್ಭದಲ್ಲಿ ಬಿಜೆಪಿ ಪ್ರಮುಖರು ಪಿಐ ಹೊಸಕೇರಪ್ಪಗೆ ಸನ್ಮಾನ ಮಾಡಿದ್ದಾರೆ. ಹೊಸಕೇರಪ್ಪ ಮೊದಲಿನಿಂದಲೂ ಶಾಸಕ ಕೆ. ಶಿವನಗೌಡನಾಯಕರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಅವರ ವಿರುದ್ಧ ಕ್ರಮ ವಹಿಸಲು ದಾಖಲೆ ಸಮೇತ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ ಎಂದರು. ತಾಲೂಕು ಅಧ್ಯಕ್ಷ ಬುಡ್ಡನಗೌಡ ಜಾಗಟಗಲ್, ಅಮರೇಶ ಪಾಟೀಲ್ ಪರ್ತಪುರ ಇತರರಿದ್ದರು.