More

    ‘ಪ್ರಾರಂಭ’ ಚಿತ್ರಕ್ಕೆ ದರ್ಶನ್​ ವಾಯ್ಸ್​ಓವರ್​ …

    ಬೆಂಗಳೂರು: ನಟ-ನಿರ್ದೇಶಕ ವಿ. ರವಿಚಂದ್ರನ್​ ಅವರ ಮಗ ಮನೋರಂಜನ್​ ರವಿಚಂದ್ರನ್​ ಅಭಿನಯದ ‘ಪ್ರಾರಂಭ’ ಚಿತ್ರವು ಇಷ್ಟರಲ್ಲಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರತಂಡದ ಪ್ಲಾನ್​ಗಳೆಲ್ಲಾ ತಲೆ ಕೆಳಗಾಗಿದೆ. ಇದೀಗ ಚಿತ್ರವನ್ನು ಮುಂದಿನ ವರ್ಷ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದ್ದು, ಅದಕ್ಕೂ ಮುನ್ನ ಶುಕ್ರವಾರ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ‘ಮೇಡೇ’ ಚಿತ್ರದಲ್ಲಿ ಅಜಯ್​ಗೆ ನಾಯಕಿಯಾದ್ರು ರಾಕುಲ್​ …

    ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಶುಕ್ರವಾರವೇ ಬಿಡುಗಡೆ ಮಾಡುವುದಕ್ಕೂ ಒಂದು ಕಾರಣವಿದೆ. ಅದೇನೆಂದರೆ ಡಿಸೆಂಬರ್​ 11, ನಾಯಕ ಮನೋರಂಜನ್​ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಚಿತ್ರದ ಟ್ರೇಲರ್​ ಬಿಡುಗಡೆ ಮಾಡುವ ಮೂಲಕ ಚಿತ್ರತಂಡದವರು ಶುಭಹಾರೈಸಿದ್ದಾರೆ.

    ಈ ಟ್ರೇಲರ್​ನ ವಿಶೇಷತೆಯೆಂದರೆ, ನಟ ದರ್ಶನ್​ ಅವರು ಧ್ವನಿ ನೀಡಿರುವುದು. ಕೆಲವು ತಿಂಗಳುಗಳ ಹಿಂದೆಯೇ, ಚಿತ್ರಕ್ಕೆ ದರ್ಶನ್​ ಅವರು ಧ್ವನಿ ನೀಡಿರುವುದು ಸುದ್ದಿಯಾಗಿತ್ತು. ಇದೀಗ ಟ್ರೇಲರ್​ನಲ್ಲಿ ದರ್ಶನ್​ ಅವರ ವಾಯ್ಸ್​ಓವರ್​ ಇದ್ದು, ಚಿತ್ರದ ಆಶಯವನ್ನು ಬಹಳ ಸರಳವಾಗಿ ಹೇಳುತ್ತಾರೆ ದರ್ಶನ್​.

    ಇದನ್ನೂ ಓದಿ: ಲವ್​ ಸೆಕ್ಸ್ ಧೋಖಾ, ಡರ್ಟಿ ಪಿಕ್ಚರ್ ನಟಿ ಆರ್ಯಾ ಬ್ಯಾನರ್ಜಿ ಶವವಾಗಿ ಪತ್ತೆ

    ‘ಪ್ರಾರಂಭ’ ಚಿತ್ರವು ಮನೋರಂಜನ್​ ಅಭಿನಯದ ಮೂರನೆಯ ಚಿತ್ರವಾಗಿದ್ದು, ಈ ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ. ಈ ಚಿತ್ರದಲ್ಲಿ ಮನೋರಂಜನ್​ಗೆ ಕೀರ್ತಿ ಕಾಲ್ಕೇರಿ ನಾಯಕಿಯಾಗಿ ಅಭಿನಯಿಸಿದ್ದು, ಪ್ರಜ್ವಲ್​ ಪೈ ಸಂಗೀತ ಸಂಯೋಜಿಸಿದ್ದಾರೆ.

    ಡ್ಯೂಪ್​ ಇಲ್ಲದೆಯೇ ಹೊಡೆದಾಡುತ್ತಿದ್ದಾರಂತೆ ಸಂಜಯ್​ ದತ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts