More

    ಮೈಸೂರಿನಿಂದ ಕೇರಳಕ್ಕೆ ತೋತಾಪುರಿ

    ಬೆಂಗಳೂರು: ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಜಗ್ಗೇಶ್ ಅಭಿನಯದ ‘ತೋತಾಪುರಿ’ ಚಿತ್ರವು ಅಂತೂ ಕೊನೆಯ ಹಂತಕ್ಕೆ ಬಂದಿದೆ. ಜಗ್ಗೇಶ್ ಅವರ ಭಾಗದ ದೃಶ್ಯಗಳನ್ನು ಚಿತ್ರೀಕರಿಸಿರುವ ಚಿತ್ರತಂಡ, ಮೈಸೂರಿನಿಂದ ಕೇರಳಕ್ಕೆ ಚಿತ್ರೀಕರಣ ಶಿಫ್ಟ್ ಮಾಡಿದೆ. ಎಲ್ಲ ಅಂದುಕೊಂಡಂತೆ ಆದರೆ, ಸೋಮವಾರ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಲಿದೆ. ಇನ್ನು ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಆದಷ್ಟು ಬೇಗ ಮುಗಿಸಿ, ಚಿತ್ರ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ.

    ಅಂದಹಾಗೆ, ‘ತೋತಾಪುರಿ’ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಕೇರಳದ ಅಲೆಪ್ಪಿಯಲ್ಲಿ ನಡೆಯುತ್ತಿದೆ. ಸುಮನ್ ರಂಗನಾಥ್ ಮತ್ತು ‘ಡಾಲಿ’ ಧನಂಜಯ್ ಅಭಿನಯದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಣ ನಡೆಯುತ್ತಿದ್ದು, ನದಿ ಮಧ್ಯೆ ದೋಣಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಕೇರಳದಲ್ಲಿ ಕರೊನಾ ಹಾವಳಿ ಹೆಚ್ಚಿದ್ದರೂ ಚಿತ್ರತಂಡದವರು ಅಲ್ಲಿ ಬೀಡುಬಿಟ್ಟಿದ್ದು, ಸೋಮವಾರ ಚಿತ್ರೀಕರಣ ಮುಗಿಸಿಯೇ ಬೆಂಗಳೂರಿಗೆ ವಾಪಸ್ಸಾಗುವುದಕ್ಕೆ ತೀರ್ವನಿಸಿದ್ದಾರೆ.

    ‘ತೋತಾಪುರಿ’ ಚಿತ್ರವನ್ನು ವಿಜಯಪ್ರಸಾದ್ ಬರೆದು ನಿರ್ದೇಶನ ಮಾಡಿದ್ದಾರೆ. ‘ಗೋವಿಂದಾಯ ನಮಃ’, ‘ಶ್ರಾವಣಿ ಸುಬ್ರಹ್ಮಣ್ಯ’ ಮುಂತಾದ ಚಿತ್ರಗಳನ್ನು ನಿರ್ವಿುಸಿರುವ ಸುರೇಶ್, ಈ ಚಿತ್ರವನ್ನು ನಿರ್ವಿುಸುತ್ತಿದ್ದು, ಎರಡು ಭಾಗಗಳಲ್ಲಿ ಈ ಚಿತ್ರ ಮೂಡಿಬರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts