More

    ಶೂಟಿಂಗ್ ವೇಳೆ ಭೀಕರ ಅಪಘಾತ; ಸ್ಟಾರ್​ ನಟನಿಗೆ ಗಂಭೀರ ಗಾಯ

    ಹೈದ್ರಾಬಾದ್​​: ಚಿತ್ರದ ಶೂಟಿಂಗ್ ವೇಳೆ ಯಂಗ್ ಹೀರೋ ನಿತಿನ್ ಗೆ ಅಪಘಾತ ಸಂಭವಿಸಿ, ನಿತಿನ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

    ವೇಣು ಶ್ರೀರಾಮ್ ನಿರ್ದೇಶನದಲ್ಲಿ ನಿತಿನ್ ಸಿನಿಮಾ ಮಾಡುತ್ತಿದ್ದಾರೆ. ತಮ್ಮುಡು ಎಂಬ ಶೀರ್ಷಿಕೆಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದ ಶೂಟಿಂಗ್ ವೇಳೆ ನಾಯಕ ನಿತಿನ್ ಗಾಯಗೊಂಡಿದ್ದಾರಂತೆ. ನಿತಿನ್ ಗೆ ಗಾಯಗಳಾಗಿದ್ದರಿಂದ ಶೂಟಿಂಗ್ ನಿಲ್ಲಿಸಲಾಗಿದೆಯಂತೆ. ಆದರೆ ಅಪಘಾತ ಹೇಗೆ ಸಂಭವಿಸಿತು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

    ಶೂಟಿಂಗ್ ವೇಳೆ ಭೀಕರ ಅಪಘಾತ; ಸ್ಟಾರ್​ ನಟನಿಗೆ ಗಂಭೀರ ಗಾಯ

    ತಮ್ಮುಡು ಚಿತ್ರದ ಚಿತ್ರೀಕರಣ ಮರೆಡುಮಿಲ್ಲಿ ಅರಣ್ಯದಲ್ಲಿ ನಡೆಯುತ್ತಿದೆ. ಅಲ್ಲಿ  ಹೊಡೆದಾಟದ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದೆ. ಈ ದೃಶ್ಯದಲ್ಲಿ ನಿತಿನ್ ಗೆ ಅಪಘಾತವಾಗಿದೆಯಂತೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ನಿತಿನ್ ಗಾಯಗೊಂಡಿದ್ದರಿಂದ ಶೂಟಿಂಗ್ ನಿಲ್ಲಿಸಲಾಗಿತ್ತು. ಗಾಯ ವಾಸಿಯಾಗಲು ಸುಮಾರು ಮೂರು ವಾರಗಳು ಬೇಕಾಗುವುದರಿಂದ ಅಲ್ಲಿಯವರೆಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ನಿತಿನ್ ಗೆ ಸಲಹೆ ನೀಡಿದ್ದಾರೆಯಂತೆ. 

    ನಿತಿನ್ ಎಕ್ಸ್‌ಟ್ರಾ-ಆರ್ಡಿನರಿ ಮ್ಯಾನ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಶ್ರೀಲೀಲಾ ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ವಕ್ಕಂತಂ ವಂಶಿ ನಿರ್ದೇಶಿಸಿದ್ದಾರೆ. ಎಕ್ಸ್‌ಟ್ರಾ-ಆರ್ಡಿನರಿ ಮ್ಯಾನ್ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಪ್ರಭಾವ ಬೀರಲಿಲ್ಲ. ಇತ್ತೀಚಿಗೆ ನಿತಿನ್ ಅಭಿನಯದ ಎಲ್ಲಾ ಸಿನಿಮಾಗಳು ನಿರಾಸೆ ಮೂಡಿಸಿವೆ. 

    ನಿಮ್ಮ ಕಣ್ಣಿನ ದೃಷ್ಟಿ ಮಸುಕಾಗ್ತಿದ್ಯಾ? ಇಂದಿನಿಂದಲೇ ಈ ಕೆಟ್ಟ ಅಭ್ಯಾಸಗಳನ್ನು ಸುಧಾರಿಸಿಕೊಳ್ಳಿ…

    ಐಶ್ವರ್ಯಾ ರೈ ಜತೆ ರೊಮ್ಯಾನ್ಸ್ ಮಾಡಿದ್ದ ನಟ ಅಬ್ಬಾಸ್ ಮಗಳು ಎಷ್ಟು ಸುಂದರವಾಗಿದ್ದಾಳೆ ನೋಡಿ..

    ಉದ್ಯಮಿ ಜತೆ ಡೇಟಿಂಗ್, ಶೀಘ್ರದಲ್ಲೇ ಮದ್ವೆ; ಕ್ಲಾರಿಟಿ ಕೊಟ್ಟ “ಕೋಟಿಗೊಬ್ಬ-3” ಚಿತ್ರದ ಹಾಟ್ ಬ್ಯೂಟಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts