More

    ವರುಣನ ಆರ್ಭಟಕ್ಕೆ ಟೋಲ್ ಧ್ವಂಸ, ಕರೊನಾ ವಾರಿಯರ್ಸ್​ ಬಚಾವ್​!

    ಕೊಲ್ಹಾಪುರ: ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದಲ್ಲಿ ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಜಿಲ್ಲೆಯ ಕಡೆಯ ಕೀಣೆ ಟೋಲ್ ನಾಕಾ ಸಂಪೂರ್ಣ ಧ್ವಂಸವಾಗಿದೆ. ಟೋಲ್​ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಕರೊನಾ ವಾರಿಯರ್ಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮಳೆ ಗಾಳಿಯ ರಭಸಕ್ಕೆ ಟೋಲ್ ನಾಕಾ, ಶೀಟ್​ಗಳು ತಗರೆಲೆಯಂ​ತೆ ಹಾರಿವೆ. ಅಲ್ಲಿದ್ದ ಕಂಪ್ಯೂಟರ್ ಪರಿಕರ ಹಾನಿಯಾದವು. ಪರಿಣಾಮ ತಾಂತ್ರಿಕ ಸಮಸ್ಯೆ ಉಂಟಾಗಿ ಆನ್​ಲೈನ್ ಸೇವೆ ಸ್ಥಗಿತಗೊಂಡಿತ್ತು. ಸೇವಾ ಸಿಂಧು ಆನ್​ಲೈನ್ ಪಾಸ್ ಹಿಡಿದು ಬಂದವರು ಕೀಣೆ ಟೋಲ್ ಬಳಿ ಕೆಲ ಸಮಯ ಪರದಾಡುವಂತಾಯಿತು. 

    ಇದನ್ನೂ ಓದಿ ಭೂಗತ ಲೋಕದ ಮಾಜಿ ಡಾನ್​​ಗೆ ಮರುಜನ್ಮ ನೀಡಿದ ಬಿಡದಿ

    ಮಳೆ ಆರ್ಭಟಕ್ಕೆ ಬೆಚ್ಚಿದ ಟೋಲ್​ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಕರೊನಾ ವಾರಿಯರ್ಸ್ ಟೆಂಟ್ ಬಿಟ್ಟು ಓಡಿ ಹೋಗಿ ಜೀವ ಉಳಿಸಿಕೊಂಡರು. ಕರ್ನಾಟಕ ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಕಟ್ಟ ಕಡೆಯ ಟೋಲ್ ಇದಾಗಿದ್ದು, ಪಾಸ್​ ಹಿಡಿದು ರಾಜ್ಯ ಪ್ರವೇಶಿಸಲು ಬಂದ ಜನರು ಕೆಲ ಗಂಟೆಗಳ ಕಾಲ ಅಲ್ಲೇ ಲಾಕ್​ ಆಗಿದ್ದರು. ಗಾಳಿ ಸಹಿತ ಮಳೆ ಸೃಷ್ಟಿಸಿದ ಅವಾಂತರವನ್ನು ಟೋಲ್​ ಬಳಿ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದ ವಿಡಿಯೋ ವೈರಲ್ ಆಗಿದೆ.

    ಇದನ್ನೂ ನೋಡಿ

    ವರುಣನ ಆರ್ಭಟಕ್ಕೆ ಟೋಲ್ ಧ್ವಂಸ

    ಕೊಲ್ಹಾಪುರ ಜಿಲ್ಲೆಯಲ್ಲಿ ಗುರವಾರ ಬಿರುಗಾಳಿ ಸಹಿತ ಸುರಿದ ಮಳೆಗೆ ಕೀಣೆ ಟೋಲ್ ನಾಕಾ ಸಂಪೂರ್ಣ ಧ್ವಂಸವಾಗಿದ್ದು, ಟೋಲ್​ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಕರೊನಾ ವಾರಿಯರ್ಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ಕರ್ನಾಟಕ ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಕಟ್ಟ ಕಡೆಯ ಟೋಲ್. #Toll #Kolhapur #Rain #CoronaWarriors #Maharashtra

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಮೇ 14, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts