More

    ಟಿ.ಎಂ.ಉಮಾಶಂಕರ್‌ಸೀತಾಪುರ ಪಿಎಸಿಎಸ್ ಅಧ್ಯಕ್ಷ

    ತರೀಕೆರೆ: ತಾಲೂಕಿನ ಸೀತಾಪುರ ಪಿಎಸಿಎಸ್ ಅಧ್ಯಕ್ಷರಾಗಿ ಟಿ.ಎಂ.ಉಮಾಶಂಕರ್, ಉಪಾಧ್ಯಕ್ಷರಾಗಿ ವೇಲಾಯುಧನ್ ಅವಿರೋಧ ಆಯ್ಕೆಯಾದರು.
    ಹಾಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಟಿ.ಎಂ.ಉಮಾಶಂಕರ್ ಹಾಗೂ ವೇಲಾಯುಧನ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಹಕಾರಿ ನಿಬಂಧಕಿ ಸುನಂದಮ್ಮ ಇಬ್ಬರ ಅವಿರೋಧ ಆಯ್ಕೆ ಘೋಷಿಸಿದರು.
    ನೂತನ ಅಧ್ಯಕ್ಷ ಟಿ.ಎಂ.ಉಮಾಶಂಕರ್ ಮಾತನಾಡಿ, ಸೀತಾಪುರ, ಸೀತಾಪುರ ಕಾವಲು, ರಾಂಪುರ, ಚಿಕ್ಕಾತ್ತೂರು, ಸಿಡುಕನಹಳ್ಳಿ ಗ್ರಾಮಗಳ 363 ಷೇರುದಾರರುಗಳನ್ನೊಳಗೊಂಡಿರುವ ಸೀತಾಪುರ ಪಿಎಸ್‌ಸಿಎಸ್ 5 ಸ್ವ ಸಹಾಯ ಸಂಘಗಳ ಮೂಲಕ 1.7 ಕೋಟಿ ರೂ.ಗಳಷ್ಟು ಕೆಸಿಸಿ ಸಾಲ ನೀಡಲಾಗಿದೆ ಎಂದರು.
    ಹಾಲಿ 363 ಷೇರುದಾರರ ಜತೆ ಹೊಸ ಷೇರುದಾರರುಗಳನ್ನು ಸೇರಿಸಿಕೊಳ್ಳುವ ಜತೆಗೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಮಾರ್ಗದರ್ಶನದಲ್ಲಿ ಹೆಚ್ಚಿನ ಸಾಲ ತರುವ ಮೂಲಕ ವ್ಯಾಪಾರ ಸಾಲ, ವಾಹನ ಸಾಲ, ಬೆಳೆ ಸಾಲ ನೀಡಲಾಗುವುದು.ರಸಗೊಬ್ಬರ ಮಾರಾಟ ಮಾಡಿ ಆದಾಯ ಹೆಚ್ಚಿಸಿಕೊಳ್ಳಲಾಗುವುದು ಎಂದು ಹೇಳಿದರು.
    ಪಿಎಸಿಎಸ್ ಉಪಾಧ್ಯಕ್ಷ ವೇಲಾಯುಧನ್, ನಿರ್ದೇಶಕರಾದ ಸಿ.ವೀರಮಣಿ, ಟಿ.ಆರ್.ಶಿವಕುಮರ್, ಟಿ.ಎಸ್.ಜಯಕುಮಾರ್, ಹರೀಶ್, ಜಾರ್ ಷರ್ೀ, ಹೇಮಾವತಿ, ಟಿ.ಸವಿತಾ, ಭಾಗ್ಯಮ್ಮ, ರಾಧ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್, ಮೇಲ್ವಿಚಾರಕರಾದ ಎಸ್.ವೆಂಕಟೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts