More

    ಅತ್ತ ಹುಲಿ ಮರಣ, ಇತ್ತ ಆನೆ ಜನನ; ಹುಟ್ಟು-ಸಾವು ಎರಡಕ್ಕೂ ಒಂದೇ ದಿನ ಸಾಕ್ಷಿ ಆಯ್ತು ಜೈವಿಕ ಉದ್ಯಾನ

    ಬನ್ನೇರುಘಟ್ಟ: ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನ ಇಂದು ಹುಟ್ಟು-ಸಾವು ಎರಡಕ್ಕೂ ಸಾಕ್ಷಿಯಾಗಿದೆ. ಇವತ್ತೊಂದೇ ದಿನದಲ್ಲಿ ಇಲ್ಲಿ ಒಂದು ಕಡೆ ಹುಲಿ ಸಾವಿಗೀಡಾದರೆ, ಮತ್ತೊಂದು ಕಡೆ ಆನೆ ಮರಿಗೆ ಜನ್ಮ ನೀಡಿದೆ.

    ಇಲ್ಲಿನ ಉದ್ಯಾನದಲ್ಲಿ 2019ರಲ್ಲಿ ಅಮರ್​-ವಿಸ್ಮಯ ಎಂಬ ಹುಲಿಗೆ ಜನಿಸಿದ್ದ ಕಿರಣ್ ಎಂಬ ಹೆಸರಿನ ಹುಲಿ ಇಂದು ಸಾವಿಗೀಡಾಗಿದೆ. ಮೂರು ವರ್ಷದ ಈ ಹುಲಿ 4 ತಿಂಗಳಿನಿಂದ ರಕ್ತದ ಪ್ರೋಟೋಜೋವಾ ಸೋಂಕಿಗೆ ಒಳಗಾಗಿ ಬಳಲುತ್ತಿತ್ತು. ಹುಲಿಯ ಆರೈಕೆ ಬಗ್ಗೆ ಪಶುವೈದ್ಯರು ತೀವ್ರ ನಿಗಾ ವಹಿಸಿದ್ದರೂ ಅದನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.

    ಅತ್ತ ಹುಲಿ ಮರಣ, ಇತ್ತ ಆನೆ ಜನನ; ಹುಟ್ಟು-ಸಾವು ಎರಡಕ್ಕೂ ಒಂದೇ ದಿನ ಸಾಕ್ಷಿ ಆಯ್ತು ಜೈವಿಕ ಉದ್ಯಾನ

    ಇನ್ನೊಂದೆಡೆ ವನಶ್ರೀ ಎಂಬ 15 ವರ್ಷದ ಹೆಣ್ಣಾನೆ ಮರಿ ಹಾಕಿದೆ. ಈ ಹಿಂದೆ ಒಂದು ಗಂಡು ಹಾಗೂ ಒಂದು ಹೆಣ್ಣು ಮರಿಯನ್ನು ಹಾಕಿದ್ದ ಇದು ಇಂದು ಇನ್ನೊಂದು ಮರಿಯಾನೆಗೆ ಜನ್ಮ ನೀಡಿದೆ. ತಾಯಿ ಹಾಗೂ ಮರಿಯಾನೆ ಎರಡೂ ಆರೋಗ್ಯವಾಗಿವೆ. ಈ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಆನೆಗಳ ಸಂಖ್ಯೆ 26ಕ್ಕೆ ಏರಿದೆ.

    ಅತ್ತ ಹುಲಿ ಮರಣ, ಇತ್ತ ಆನೆ ಜನನ; ಹುಟ್ಟು-ಸಾವು ಎರಡಕ್ಕೂ ಒಂದೇ ದಿನ ಸಾಕ್ಷಿ ಆಯ್ತು ಜೈವಿಕ ಉದ್ಯಾನ

    ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿ ಬೆಳಗ್ಗೆ ನಾಪತ್ತೆ!

    ‘ಗರ್ಲ್​ ನಂ. 166’ ಗ್ರೇಟ್ ಎಸ್ಕೇಪ್​: 7ನೇ ವಯಸ್ಸಲ್ಲಿ ನಾಪತ್ತೆ, ಹದಿನಾರನೇ ವಯಸ್ಸಲ್ಲಿ ಮನೆಗೆ ಬಂದ್ಲು!

    ಆಪರೇಷನ್​ ವೇಳೆ ಸಾವಿಗೀಡಾದ ಬಾಲಕಿ; ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ಕುಟುಂಬಸ್ಥರ ಆರೋಪ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts