ಗೋಣಿಕೊಪ್ಪ: ರುದ್ರಬೀಡು ಸಮೀಪದ ಹೊನ್ನಿಕೊಪ್ಪಲಿನಲ್ಲಿ ಹಾಡಹಗಲೇ ಹುಲಿ ಕಾಡು ಹಂದಿಯನ್ನು ಕೊಂದಿದ್ದು, ಜನರು ಭಯಭೀತರಾಗಿದ್ದಾರೆ.
ಗ್ರಾಮದ ಪ್ರಶಾಂತ್ ಅವರ ಕಾಫಿತೋಟದಲ್ಲಿ ಹುಲಿ ಕಾಡುಹಂದಿಯನ್ನು ಕೊಂದು ಹಾಕಿದ್ದು, ಕಳೇಬರ ಪತ್ತೆಯಾಗಿದೆ. ಎರಡು-ಮೂರು ದಿನಗಳ ಹಿಂದೆ ಕಾಡುಹಂದಿಯನ್ನು ಬಲಿ ಪಡೆದಿದೆ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಕಾಫಿತೋಟಕ್ಕೆ ಕೆಲಸಕ್ಕೆಂದು ತೆರಳಿದ್ದ ಕಾರ್ಮಿಕರು, ಹುಲಿಯನ್ನು ಕಂಡು ಭಯಭೀತರಾಗಿದ್ದಾರೆ. ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಬೋನು ಇಡಲು ಸಿದ್ಧತೆ ನಡೆಸಲಾಗಿದೆ.