More

    ಹಾಲು ಕರೆಯುವಾಗ ಸಿಡಿಲು ಬಡಿದು ಹಸು ಸೇರಿದಂತೆ ತಂದೆ, ಇಬ್ಬರು ಪುತ್ರಿಯರ ದುರ್ಮರಣ

    ಕೋಲಾರ: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಭಾರಿ ಮಳೆಗೆ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಧಾರುಣವಾಗಿ ಸಾವಿಗೀಡಾಗಿದ್ದಾರೆ.

    ಇದನ್ನೂ ಓದಿ: ಕರೊನಾದಿಂದಾಗಿ ಕೆಲಸ ಹೋಯ್ತು; ಈಗ ನರೇಗಾದಲ್ಲಿ ಕೂಲಿ ಮಾಡ್ತಿದಾನೆ ಈ ಇಂಜಿನಿಯರ್!

    ಕೋಲಾರ ಸಮೀಪದ ಆಂಧ್ರ ಗಡಿ ಚಿತ್ತೂರು ಜಿಲ್ಲೆಯ ಪೆದ್ದಪಂಜಾಣಿ ಮಂಡಲಂನ ತಿಪ್ಪಿರೆಡ್ಡಿಪಲ್ಲಿಯಲ್ಲಿ ದುರಂತ ಸಂಭವಿಸಿದೆ. ಸಿಡಿಲು ಬಡಿದು ತಂದೆ ಹಾಗೂ ಇಬ್ಬರು ಪುತ್ರಿಯರು ಮತ್ತು ಒಂದು ಹಸು ಮೃತಪಟ್ಟಿದೆ.

    ತಂದೆ ರಾಮಕೃಷ್ಣ (52) ಮಕ್ಕಳಾದ ರಮಾದೇವಿ (24) ಹಾಗೂ ಮೀನಾ (22) ಮೃತ ದುರ್ದೈವಿಗಳು. ತೋಟದ ಬಳಿ ಹಸುವಿನಲ್ಲಿ ಹಾಲು ಕರೆಯುತ್ತಿದ್ದ ವೇಳೆ ಸಿಡಿಲು ಬಡಿದು ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಿಡಿಲಾಘಾತದಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಮಾತಿನಿಂದ ಮರುಳು ಮಾಡುತ್ತಿದ್ದ… ಕಥೆ ಕಟ್ಟಿ ವಂಚಿಸುತ್ತಿದ್ದ!

    ಅದ್ಧೂರಿ ಜೀವನಕ್ಕಾಗಿ ಹುಡುಗಿ ಹೆಸರಲ್ಲಿ ವಂಚಿಸಲು ತಾಯಿಗೆ ಮಗನ ಸಾಥ್: ಇವರ ಕತೆ ಕೇಳಿದ್ರೆ ಬೆರಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts