ಶಿವಮೊಗ್ಗ: ಕೆಎಸ್ಆರ್ಟಿ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದ ಭದ್ರಾವತಿ ತಾಲೂಕು ಮೊಸರಹಳ್ಳಿಯ ಕೌಸಲ್ಯಾ (52) ಎಂಬುವರ ಕುಟುಂಬಕ್ಕೆ ಮೂರು ಲಕ್ಷ ರೂ.ಗಳ ಪರಿಹಾರ ಧನದ ಚೆಕ್ನ್ನು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ವಿಜಯಕುಮಾರ್ ಗುರುವಾರ ಹಸ್ತಾಂತರಿಸಿದರು. 2021ರ ಡಿಸೆಂಬರ್ 12ರಂದು ತಿರುವಣ್ಣಾಮಲೈ-ಬೆಂಗಳೂರು-ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ಬಾಣಾವರಣದ ಚಿಕ್ಕಾರಹಳ್ಳಿ ಗೇಟ್ ಬಳಿ ಕಲ್ಲಿಗೆ ಗುದ್ದಿದ ಪರಿಣಾಮ ಬಸ್ನಲ್ಲಿದ್ದ ಕೌಸಲ್ಯ ಮೃತಪಟ್ಟಿದ್ದರು. ಇದೀಗ ಶಿವಮೊಗ್ಗ ವಿಭಾಗೀಯ ಕೆಎಸ್ಆರ್ಟಿಸಿಯಿಂದ ಪರಿಹಾರ ನೀಡಲಾಗಿದೆ. ಈ ಸಂದರ್ಭದಲ್ಲಿ ಮೃತ ಮಹಿಳೆ ಕೌಸಲ್ಯಾ ಅವರ ಪತಿ ರಾಮದಾಸ್ ಪರಿಹಾರದ ಚೆಕ್ ಸ್ವೀಕರಿಸಿದರು