ದಾವಣೆಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ನೇಹಿತರು ಸಾವಿಗೀಡಾಗಿದ್ದಾರೆ. ಟಾಟಾ ಏಸ್ ವಾಹನ ಹಾಗೂ ಬೈಕ್ ನಡುವೆ ಗುರುವಾರ ರಾತ್ರಿ ಈ ಅಪಘಾತ ಸಂಭವಿಸಿದೆ.
ಚನ್ನಗಿರಿ ತಾಲೂಕಿನ ಮಲ್ಲೇಶ್ವರ ಗ್ರಾಮದ ಅಜ್ಜಯ್ಯ (21), ದೇವರಾಜ (18), ಮಂಜುನಾಥ್ (18) ಮೃತಪಟ್ಟವರು. ಈ ಮೂವರು ಸ್ನೇಹಿತರು ಚೌತಿ ಪ್ರಯುಕ್ತ ಗ್ರಾಮದಲ್ಲಿ ಗಣೇಶನನ್ನು ಕೂರಿಸಲು ಅನುಮತಿ ಪಡೆಯುವ ಸಲುವಾಗಿ ಚನ್ನಗಿರಿ ಪೊಲೀಸ್ ಠಾಣೆಗೆ ತೆರಳಿದ್ದರು.
ಗಣೇಶನನ್ನು ಕೂರಿಸಲು ಪೊಲೀಸರ ಅನುಮತಿ ಸಿಕ್ಕ ಸಂತೋಷದಲ್ಲಿ ಬೈಕ್ನಲ್ಲಿ ಮರಳುತ್ತಿದ್ದ ಇವರು ಅಪಘಾತಕ್ಕೀಡಾಗಿದ್ದು, ಮೂವರೂ ಸಾವಿಗೀಡಾಗಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬನನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಚೀನಾದಿಂದ ಭಾರತಕ್ಕೆ ಮತ್ತಷ್ಟು ಆತಂಕ; 76 ಪುಟಗಳ ಅಧ್ಯಯನ ವರದಿಯಲ್ಲಿ ಹಲವು ವಿಷಯ ಬಹಿರಂಗ!
ಒಂದೇ ಒಂದು ನಿರ್ಧಾರ; ಭಾರತದಲ್ಲಿನ ನಾಲ್ಕು ಸಾವಿರ ಉದ್ಯೋಗಿಗಳ ಭವಿಷ್ಯ ಆತಂಕದಲ್ಲಿ..!