More

    ಗಣೇಶನನ್ನು ಕೂರಿಸಲು ಪೊಲೀಸರ ಅನುಮತಿ ಪಡೆದು ಮರಳುತ್ತಿದ್ದ ಮೂವರು ಸ್ನೇಹಿತರು ಅಪಘಾತಕ್ಕೆ ಬಲಿ; ಇಬ್ಬರು ಸ್ಥಳದಲ್ಲೇ ಸಾವು

    ದಾವಣೆಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ನೇಹಿತರು ಸಾವಿಗೀಡಾಗಿದ್ದಾರೆ. ಟಾಟಾ ಏಸ್ ವಾಹನ ಹಾಗೂ ಬೈಕ್ ನಡುವೆ ಗುರುವಾರ ರಾತ್ರಿ ಈ ಅಪಘಾತ ಸಂಭವಿಸಿದೆ.

    ಚನ್ನಗಿರಿ ತಾಲೂಕಿನ ಮಲ್ಲೇಶ್ವರ ಗ್ರಾಮದ ಅಜ್ಜಯ್ಯ (21), ದೇವರಾಜ (18), ಮಂಜುನಾಥ್ (18) ಮೃತಪಟ್ಟವರು. ಈ ಮೂವರು ಸ್ನೇಹಿತರು ಚೌತಿ ಪ್ರಯುಕ್ತ ಗ್ರಾಮದಲ್ಲಿ ಗಣೇಶನನ್ನು ಕೂರಿಸಲು ಅನುಮತಿ ಪಡೆಯುವ ಸಲುವಾಗಿ ಚನ್ನಗಿರಿ ಪೊಲೀಸ್ ಠಾಣೆಗೆ ತೆರಳಿದ್ದರು.

    ಗಣೇಶನನ್ನು ಕೂರಿಸಲು ಪೊಲೀಸರ ಅನುಮತಿ ಸಿಕ್ಕ ಸಂತೋಷದಲ್ಲಿ ಬೈಕ್​ನಲ್ಲಿ ಮರಳುತ್ತಿದ್ದ ಇವರು ಅಪಘಾತಕ್ಕೀಡಾಗಿದ್ದು, ಮೂವರೂ ಸಾವಿಗೀಡಾಗಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬನನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.

    ಚೀನಾದಿಂದ ಭಾರತಕ್ಕೆ ಮತ್ತಷ್ಟು ಆತಂಕ; 76 ಪುಟಗಳ ಅಧ್ಯಯನ ವರದಿಯಲ್ಲಿ ಹಲವು ವಿಷಯ ಬಹಿರಂಗ!

    ಒಂದೇ ಒಂದು ನಿರ್ಧಾರ; ಭಾರತದಲ್ಲಿನ ನಾಲ್ಕು ಸಾವಿರ ಉದ್ಯೋಗಿಗಳ ಭವಿಷ್ಯ ಆತಂಕದಲ್ಲಿ..!

    ಸ್ನಾನಕ್ಕೆಂದು ಹೋಗಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವು; 2 ಗಂಟೆ ಬಳಿಕ ಬಾತ್​ರೂಮ್​ ಬಾಗಿಲು ಮುರಿದು ನೋಡಿದ ಮನೆಯವರಿಗೆ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts